ವಾಣಿ ಸುರೇಶ್ ಕಾಮತ್ ಅವರ ಬರವಣಿಗೆ ಚೆನ್ನಾಗಿದೆ. ಮೊದಲಿಗೆ ಸಾಮಾನ್ಯ ಎನ್ನಿಸುವ ಕಥೆ ಮುಂದೆ ಸಾಗುತ್ತಾ ಕುತೂಹಲ ಹೆಚ್ಚಿಸುತ್ತದೆ.
ನಾಗರಾಜ ಹೆಗ್ಡೆ ಜಾಲಿಮನೆ ಅವರ ಕಂಠ ಈ ಕಥೆಗೆ ಜೀವ ತುಂಬಿದೆ. ಅವರ ದನಿ ವಿನ್ಯಾಸ ಮಾರ್ಪಡುಗಳು ಕಥೆಯನ್ನು ಕಣ್ಣ ಮುಂದೆ ಕಟ್ಟಿಡುತ್ತವೆ.
ಈ ಕಥೆಯ ಹಿನ್ನೆಲೆ ಸಂಗೀತ, ನಡುವೆ ಬರುವ ಶಬ್ದ ತುಣುಕುಗಳ ಝಲಕ್ ಕೇಳುಗರಿಗೆ ಉತ್ತಮ ಅನುಭವ ನೀಡುತ್ತದೆ.
ರೈಲು ತುಂಬಾ ತಿರುವುಗಳನ್ನು ತೆಗೆದುಕೊಂಡಿದೆ. ಪಾತ್ರ, ಸ್ಥಳ, ಸೂಕ್ಷ್ಮ ವಿಚಾರಗಳ detailing ಚೆನ್ನಾಗಿದೆ.
ಓದಿದ ರೀತಿ ಕೇಳುಗರಿಗೆ ಕಥೆಯನ್ನು ಹತ್ತಿರವಾಗಿಸುತ್ತದೆ, ಧ್ವನಿ ಬದಲಾವಣೆ ಒಂದು ಪೂರಕ ಅಂಶ.
ಅಭಿನಂದನೆಗಳು 👏
ಗುರುಕಿರಣ್ ಅವರ ಮುಳುಗಡೆ ಕತೆ ಅಣೆಕಟ್ಟೆನಿಂದ ಮುಳುಗಡೆಯಾದ ಹಳ್ಳಿಗಳ ಜೊತೆ ಮುಳುಗಿ ಹೋದ ಬದುಕುಗಳ ಕತೆಯನ್ನು ಮಾರ್ಮಿಕವಾಗಿ ಹೇಳುತ್ತದೆ. ನಗುವಾ ನಯನ ಅವರದ್ದು ತುಂಬ ಜೀವಂತಿಕೆಯಿಂದ ಕೂಡಿದ ಕತೆ ಹೇಳುಗಾರಿಕೆ. ಈ ಕಲೆಯಲ್ಲಿ ಅವರು ನಿಜಕ್ಕೂ ನಿಪುಣರು!
ನಮ್ರತಾ ಅವರೇ, ತುಂಬಾ ಚೆನ್ನಾಗಿ ಓದಿದೀರಿ. ಕೇಳಿ ತುಂಬಾ ಖುಷಿಯಾಯ್ತು. ಧನ್ಯವಾದಗಳು. ಮೈಲಾಂಗ್ ಅವರಿಗೆ ಕೂಡ ಧನ್ಯವಾದಗಳು.
ನಗುವಾ ನಯನಾ ಅವರ ದನಿಯಲ್ಲಿ ಮೂಡಿಬಂದಿರುವೀ ಆಡಿಯೋ ಕತೆ ಬಹಳ ಸೊಗಸಾಗಿದೆ. ಅತ್ಯಂತ ಮನೋಜ್ಞವಾಗಿ ಕತೆಯನ್ನು ನಿರೂಪಿಸಿದ್ದಾರೆ.
ಇನ್ನು, ಕತೆಯ ವಿಷಯ : ಕತೆಯ ಶುರು, ನಿರೂಪಣೆ, ಕತೆ ಸಾಗುವ ರೀತಿ ಲವಲವಿಕೆಯಿಂದ ಕೂಡಿದೆ. ಪತ್ತೇದಾರಿಕೆಯ ಗುಣ ಹೊತ್ತು ಸಾಗುವ ಕತೆ, ಕೊನೆಗೆ ತಿಳಿಯಪಡಿಸುವ ಆಶಯ ಮಹತ್ತರವಾದದ್ದು.
ಸರಳ ಹಾಗೂ ಕುತೂಹಲಕಾರಿ ಕತೆ- ಮಾನವ ಸಂವೇದನೆ, ಸಂಬಂಧಗಳ ಸಂಕೀರ್ಣತೆ.. ಒಂದು ಕುಟುಂಬದೊಳಗಿನ ಒಳಗುದಿ, ಒಳಜಗಳ, ಭಿನ್ನಾಭಿಪ್ರಾಯ, ಪೂರ್ವಗ್ರಹ, ತಪ್ಪುಕಲ್ಪನೆ ಹೇಗೆಲ್ಲ ಇರುತ್ತದೆ, ಏನೆಲ್ಲ ಪರಿಣಾಮ ಬೀರುತ್ತದೆ ಎಂಬುದನ್ನು ಸಹ ನಮ್ಮ ಮುಂದಿಡುತ್ತದೆ.
ಸಂಪತ್ ಅವರಿಗೆ ಪ್ರೀತಿಪೂರ್ವಕ ಅಭಿನಂದನೆಗಳು
ಪುಟಾಣಿಗಳಿಗಾಗಿ ಬರೆದ ಕತೆಗೆ ಪುಟ್ಟ ಹುಡುಗಿ ದನಿಯಾಗಿದ್ದು ತುಂಬಾ ಚೆನ್ನಾಗಿದೆ. ಭಾಷೆಯ ಮೇಲಿನ ಹಿಡಿತ ಸ್ಪಷ್ಟತೆ ಕೇಳಿದರೆ ಖುಷಿಯಾಯ್ತು. ಮಕ್ಕಳ ಕತೆಗಳನ್ನು ಮಕ್ಕಳ ಧ್ವನಿಯಲ್ಲಿ ಕೇಳುವುದೇ ಚೆಂದ. ಇನ್ನಷ್ಟು ಕತೆ ಇದೇ ಧ್ವನಿಯಲ್ಲಿ ಕೇಳುವಾಸೆ.
ಇದು ನೈಜ ಘಟನೆಯನ್ನು ಆಧರಿಸಿ ಬರೆದ ನನ್ನ ಕಲ್ಪನೆಯ ಕಥೆ. ಹೆಸರುಗಳನ್ನು ಬದಲಾಯಿಸಿದರೂ, ಘಟನೆಯ ಸನ್ನಿವೇಶ ಮತ್ತು ಸ್ಥಳವನ್ನು ಯಥಾವತ್ತಾಗಿ ಚಿತ್ರಿಸಲಾಗಿದೆ. ನಾನು ಇತ್ತೀಚೆಗೆ ಓದಿದ "ನಿಮ್ಮ ಸುಪ್ತ ಪ್ರಜ್ಞಾ ಮನಸ್ಸಿನ ಶಕ್ತಿ " ಎಂಬ ಪುಸ್ತಕದಲ್ಲಿ ಒಂದು ವಿಚಾರ ಮೂಲ ಆಂಗ್ಲ ಲೇಖಕರು ಬರೆದಿದ್ದರು. ನಾವು ಯಾವುದೇ ವಿಚಾರದಲ್ಲಿ ತುಂಬಾ ಚಾಲೇಂಜ್ ಮಾಡಿದರೆ, ಆಗ ನಮ್ಮ ಸುಪ್ತ ಮನಸ್ಸಿನ ಶಕ್ತಿ ಅದರ ವಿರುದ್ಧವಾಗಿ ಕೆಲಸ ಮಾಡುವುದಂತೆ.