Click here to Download MyLang App

ತಂತ್ರಾಗ್ನಿ,  ಗಣೇಶ್ ಪ್ರಸಾದ್ ಮಂಜೇಶ್ವರ,  Tantragni,  Ganesh Prasad Manjeswara,

ತಂತ್ರಾಗ್ನಿ (ಇಬುಕ್)

e-book

ಪಬ್ಲಿಶರ್
ಗಣೇಶ್ ಪ್ರಸಾದ್ ಮಂಜೇಶ್ವರ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಸ್ವಪ್ರಕಾಶನ

Publisher: Swaprakashana

 

ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡ ಅವನಿಗೆ ಭರವಸೆಯ ಎಲ್ಲ ಬಾಗಿಲುಗಳು ಮುಚ್ಚಿವೆ ಎಂದು ತೋರಿದಾಗ ಅನಿರೀಕ್ಷಿತವಾಗಿ ನಿಗೂಢವಾದ  ಬಾಗಿಲೊಂದು  ತೆರೆದುಕೊಳ್ಳುತ್ತದೆ. ಅದನ್ನು ಜೀವನದ ಹೊಸ ಶಕೆಯ ಪ್ರಾರಂಭ ಎಂದುಕೊಳ್ಳುತ್ತಾನೆ ಅವನು. ಅದು ನಿಜಕ್ಕೂ ಒಂದು ಪ್ರಾರಂಭವೇ? ಬಯಸದೆ ಸಿಕ್ಕಿದ ಆ ಅರ್ಥೈಸಲಾಗದ ಯಂತ್ರ ಮಂತ್ರ ತಂತ್ರಗಳ ದುರ್ಗಮ ಹಾದಿಯಲ್ಲಿ ಹಲವು ವಿಸ್ಮಯಕಾರಿ  ಅನುಭವಗಳಿಗೆ ದೃಕ್‌ ಸಾಕ್ಷಿಯಾಗುತ್ತ ಸಾಗುವ ಅವನು ಗುರಿ  ಮುಟ್ಟಿದನೇ? ಮುಂದಿನ ಗುಟ್ಟನ್ನು ಸುತರಾಂ ಬಿಟ್ಟು ಕೊಡದೆ  ಚಿತ್ರ ವಿಚಿತ್ರ ಅನುಭವಗಳನ್ನು ಸವಾಲಿನಂತೆ ಒಡ್ಡುತ್ತಾ ಹುಟ್ಟಿ ಸಾಯುತ್ತಿದ್ದ ದಿನ ರಾತ್ರಿಗಳನ್ನು ನಿರಂತರ ಕ್ರಮಿಸಿ ಅವನು ಗಳಿಸಿದ್ದಾದರೂ ಏನು? ಇಂದ್ರಿಯಗಳಿಗೆ ಮೀರಿದ ಅನುಭವಗಳು ಅವನನ್ನು ತಲುಪಿಸಿದ್ದಾದರೂ ಎಲ್ಲಿಗೆ? ತಂತ್ರ, ಮಂತ್ರ. ಅಧ್ಯಾತ್ಮಗಳನ್ನು ಬಹಳ  ಹತ್ತಿರದಿಂದ ನಿರೂಪಿಸುವ ರೋಚಕ ಕಥಾನಕ. 

 

ಪುಟಗಳು: 199

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 11 reviews
82%
(9)
0%
(0)
9%
(1)
0%
(0)
9%
(1)
G
Gururaja Tantry
ಒಂದು ಕೆಟ್ಟ ಪುಸ್ತಕ.

ಮೂಢನಂಬಿಕೆಗಳಿಗೆ ಇಂಬು ಕೊಡುವ ಪುಸ್ತಕ. ಹಣ ಮತ್ತು ಸಮಯ ಎರಡೂ ಹಾಳು. ಏನೂ ಇಷ್ಟವಾಗಲಿಲ್ಲ.

A
AMAR SHETTIGAR

ತಂತ್ರಾಗ್ನಿ (ಇಬುಕ್)

ಎಸ್ ನರಹರಿ ಬಾಲಾಜಿ

ಕಾದಂಬರಿ ಅದ್ಭುತವಾಗಿತ್ತು! ತಂತ್ರವಿದ್ಯೆಗೆ ಸಂಬಂಧಿಸಿದ ಆಳವಾದ ಅಧ್ಯಯನ ಬರಹಕ್ಕೆ ವಿಶೇಷ ಮೆರುಗು ತಂದುಕೊಟ್ಟಿದೆ. ಕಥೆ ಮುಂದುವರಿದಂತೆ ಮುಂದೇನಾಗತ್ತೋ ಅನ್ನೋ ಕುತೂಹಲವೂ ಮುಂದುವರಿಯುತ್ತೆ. ದಕ್ಷಿಣದ ಚಿರಿಯನ್ ಕಾವಿನಿಂದ ಉತ್ತರದ ಶಿಖರಪುರಿವರೆಗೆ ಹರಡಿಕೊಂಡಿರುವ ಸನ್ನಿವೇಶಗಳು, ಪಾಶ್ಚಾತ್ಯ ದೇಶಗಳ ತಂತ್ರವಿದ್ಯೆಯನ್ನೊಳಗೊಂಡ ಕೆಲವು ಸನ್ನಿವೇಶಗಳು, ಕಥಾ ಚೌಕಟ್ಟಿನಲ್ಲಿ ಶಿಷ್ಯ ತನ್ನ ಗುರುವಿಗೇ ಗುರುವಾಗೋದು!(ಹೇಗೆ ಅಂತ ಕಾದಂಬರಿ ಓದೇ ತಿಳಿಯಬೇಕು) ಎಲ್ಲವೂ ಬಹಳ ಹಿಡಿಸಿತು. ಡಾರ್ಕ್/ಹಾರರ್ ಜಾನರ್ ಇಷ್ಟಪಡೋರು ಖಂಡಿತ ಓದಲೇಬೇಕಾದ ಪುಸ್ತಕವಿದು. ಒಳ್ಳೆ ಮಜಾ ಕೊಡತ್ತೆ🔥

S
Sunil

"ತಂತ್ರಾಗ್ನಿ" ಕಾದಂಬರಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಪ್ರತಿಯೊಂದು ಪಾತ್ರಗಳು ಕಣ್ಣ ಮುಂದೆ ನಡೆದಿದೆ ಅಂತ ಅನಿಸುತ್ತದೆ. ತಾಂತ್ರಿಕ ಲೋಕದ ಬಗ್ಗೆ ತುಂಬಾ ಹತ್ತಿರದಿಂದ ಅಧ್ಯಯನ ಮಾಡಿರುವುದು ಅಂತನಿಸುತ್ತದೆ. ಯಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿಗಳು "ತುಳಸಿದಳ", ಲೇಖಕ ಕೌಂಡಿನ್ಯ ಅವರ ಕಾದಂಬರಿ ಫಾಲನೇತ್ರ ಕಾದಂಬರಿಗಳನ್ನು ಓದಿ ಹಲವು ವರ್ಷಗಳ ನಂತರ ಅದೇ ರೀತಿ ಕಾದಂಬರಿ ಸಿಕ್ಕಿದ್ದು "ತಂತ್ರಾಗ್ನಿ"

J
Jagadeesha B N

ಕಥಾನಾಯಕ ಎಲ್ಲವೂ ಮುಗಿದು ಹೋಯಿತು ಎಂದು ಕೈ ಚೆಲ್ಲಿದಾಗ ಅಂತ್ಯಕ್ಕೆ ಮತ್ತೊಂದು ಆರಂಭವಾದಂತೆ silver liningನಂತೆ ಕಾಣುವ ಆಕಸ್ಮಿಕ ದಾರಿ , ವಿಜ್ಞಾನಕ್ಕೆ ನಿಲುಕದ ಯಂತ್ರ-ತಂತ್ರ-ಮಂತ್ರ ಗಳ ಅಜ್ಞಾತ ಹಾದಿಯಲ್ಲಿ ಕರ್ಣ ಪಿಶಾಚಿಯ ಸಿದ್ಧಿಯ ಅನುಭವ-ತೊಳಲಾಟದೊಂದಿಗೆ, ಗುರುಪರಂಪರೆ-ಪುನರ್ಜನ್ಮ ಗಳ ನಿಗೂಢ ವಿಷಯಗಳನ್ನೊಳಗೊಂಡ ರೋಚಕ ಕಥಾನಕ "ತಂತ್ರಾಗ್ನಿ". ಇದು ನನಗೆ ಪ್ಯಾಪಿಲಾನ್ ನಂತರ ರೋಮಾಂಚನ ಉಂಟು ಮಾಡಿದ ಕೃತಿ. ಹೀಗೆ ಸಾಹಿತ್ಯ ಕೃಷಿ ತಮ್ಮಿಂದ ಮುಂದುವರೆಯಲಿ ಎಂದು ಕರ್ತೃ ಶ್ರೀ ಗಣೇಶ ಪ್ರಸಾದ್ ಮಂಜೇಶ್ವರ ರವರಿಗೆ ಸ್ನೇಹ ಪೂರ್ವಕ ಶುಭಾಹಾರೈಕೆಗಳು