Click here to Download MyLang App

ಕರ್ನಾಟಕದ ಭೂವೈಜ್ಞಾನಿಕ ವಿಸ್ಮಯಗಳು (ಇಬುಕ್)

ಕರ್ನಾಟಕದ ಭೂವೈಜ್ಞಾನಿಕ ವಿಸ್ಮಯಗಳು (ಇಬುಕ್)

e-book

ಪಬ್ಲಿಶರ್
ಡಾ|| ಆರ್. ಶ್ರೀನಿವಾಸನ್ , ಎಸ್. ಸೀತಾರಾಮು
ಮಾಮೂಲು ಬೆಲೆ
Rs. 65.00
ಸೇಲ್ ಬೆಲೆ
Rs. 65.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಲೇಖಕರು:


ಡಾ|| ಆರ್. ಶ್ರೀನಿವಾಸನ್

ಎಸ್. ಸೀತಾರಾಮು

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಜಗತ್ತಿನ ಪೀಠ ಭೂಮಿಗಳ ಪೈಕಿ ಕರ್ನಾಟಕವು ಒಂದು. ಭೂಮಿಯ ಆದಿಮ ಸ್ಥಿತಿಯಲ್ಲಿ ರೂಪುಗೊಂಡ ಅತ್ಯಂತ ಪುರಾತನ ಶಿಲೆಗಳು ಇಲ್ಲಿವೆ. ಮುನ್ನೂರು ಕೋಟಿ ವರ್ಷಗಳಿಗೂ ಹಿಂದೆ ಹುಟ್ಟಿದ ಶಿಲೆಗಳು ರಾಜ್ಯಾದ್ಯಂತ ವ್ಯಾಪಕವಾಗಿ ಹರಡಿವೆ. ಈ ಸುದೀರ್ಘ ಅವಧಿಯಲ್ಲಿ ಈ ನೆಲ ನಿರಂತರವಾಗಿ ಬದಲಾವಣೆ ಹೊಂದಿದೆ. ಅಗ್ನಿ ಶಿಲೆಗಳು ಕೊಚ್ಚಿ ಹೋಗಿ, ಸಾಗರ ತಳ ಸೇರಿ, ಸಂಚಯನ ಶಿಲೆಯಾಗಿ ಪುರ್ನರ್ವಿಸಿವೆ. ನೆಲದಾಳಕ್ಕೆ ಕುಸಿದು ಅಧಿಕ ಒತ್ತಡ, ಉಷ್ಣತೆಯಲ್ಲಿ ರೂಪಾಂತರಣ ಗೊಂಡಿವೆ. ಮಳೆ, ಗಾಳಿ, ಬಿಸಿಲು, ನದಿ, ಒಂದೊಂದೊ ಭೂ ಮೇಲ್ಮೈನ ಚಹರೆಯನ್ನೇ ಬದಲಾಯಿಸಿವೆ. ಈ ಎಲ್ಲ ಪ್ರಕ್ರಿಯೆಯಲ್ಲಿ ನೆಲದ ಮೇಲ್ಮೈಯಲ್ಲಿ ವೈವಿಧ್ಯಮಯ ರೂಪಗಳು ಮೈದಳೆಯುತ್ತವೆ. ಹೀಗೆ ಮೊಡುವ ಆಕೃತಿಗಳು ಮಾನವನ ಅನುಕರಣೆಗೆ ಮೀರಿವೆ. ಕರ್ನಾಟಕದ ಅನೇಕ ಭಾಗಗಳಲ್ಲಿ ಭೂಮಿಯಲ್ಲಿ ಉಂಟಾಗಿರುವ ಅಸಂಖ್ಯಾತ ಬದಲಾವಣೆಗಳು ನೈಸರ್ಗಿಕ ಕಲಾಶಿಲ್ಪವಾಗಿ ಉಳಿದಿವೆ. ಮೈಸೂರಿನ ಚಾಮುಂಡಿಬೆಟ್ಟ ನೆಲದಿಂದ ಮೇಲೆದ್ದು ೭೯ ಕೋಟಿ ವರ್ಷಗಳಾಗಿವೆ. ಆಗ ಹಿಮಾಲಯದ ಪರ್ವತವೇ ಹುಟ್ಟಿರಲಿಲ್ಲ. ಭಾರತ ಉಪಖಂಡ ದಕ್ಷಿಣ ಗೊಳಾರ್ಧದ ಖಂಡಗಳೊಡನೆ ಬೆಸುಗೆ ಯಾಗಿತ್ತು. ದೈತ್ಯ ಪೆಡಂಭೂತಗಳು ಭೊಮಿಯ ಮೇಲೆ ಹುಟ್ಟುತ್ತವೆಂಬ ಸೂಚನೆಗಳು ಆಗ ಇರಲಿಲ್ಲ. ಈ ನೆಲದ ಒಂದೊಂದು ಬಗೆಯ ಶಿಲೆಯಲ್ಲೂ ಭೂಮಿಯ ರೋಚಕ ಚರಿತ್ರೆಯ ಪುಟಗಳು ಅಡಗಿವೆ.

- ವಿಕಿಪೀಡಿಯಾ ಪರಿಚಯ..

ಕರ್ನಾಟಕದ ಅಂತಹ ಭೂ ವೈಜ್ಞಾನಿಕ ವಿಸ್ಮಯಗಳನ್ನು ಈ ಕೃತಿ ಪರಿಚಯಿಸಿದೆ.

 

ಪುಟಗಳು: 72

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !