Click here to Download MyLang App

ಬಿ.ಆರ್. ವೆಂಕಟರಮಣ ಐತಾಳ,   ಜನ್ನನ ಯಶೋಧರ ಚರಿತೆ ಪ್ರವೇಶ,  ಜನ್ನ,  Yashodhara Charite Pravesha,  B.R. Venkataramana Aithala,

ಜನ್ನನ ಯಶೋಧರ ಚರಿತೆ ಪ್ರವೇಶ (ಇಬುಕ್)

e-book

ಪಬ್ಲಿಶರ್
ಬಿ.ಆರ್. ವೆಂಕಟರಮಣ ಐತಾಳ
ಮಾಮೂಲು ಬೆಲೆ
Rs. 60.00
ಸೇಲ್ ಬೆಲೆ
Rs. 60.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಅಕ್ಷರ ಪ್ರಕಾಶನಕ್ಕೆ ೫೦ ತುಂಬಿದ ೨೦೦೬ನೆಯ ವರ್ಷ, ದಿ| ಕೆ.ವಿ. ಸುಬ್ಬಣ್ಣನವರ ನೆನಪಿಗೆ, ಈ ಹೊಸ ಪುಸ್ತಕಮಾಲೆಯ ಮೊದಲ ಕಂತಿನ ೨೫ ಪುಸ್ತಕಗಳು ಬಿಡುಗಡೆಗೊಂಡವು; ೨೦೦೭ರಲ್ಲಿ ಎರಡನೆಯ ಕಂತಿನ ಇನ್ನೂ ೧೦ ಪುಸ್ತಕಗಳು ಮತ್ತು ೨೦೦೯ರಲ್ಲಿ ಇನ್ನೂ ೧೫ - ಹೀಗೆ ಒಟ್ಟು ೫೦ ಪುಸ್ತಕಗಳು ಈವರೆಗೆ ಈ ಮಾಲಿಕೆಯಲ್ಲಿ ಪ್ರಕಟಗೊಂಡಿವೆ.

ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕು - ಎಂಬ ಉದ್ದೇಶವಿಟ್ಟುಕೊಂಡು ಅಕ್ಷರ ಪ್ರಕಾಶನವು ಈ ಪುಸ್ತಕಮಾಲಿಕೆಯನ್ನು ಆರಂಭಿಸಿದೆ. ತಲಾ ೧೦೮ ಪುಟಗಳ ಈ ಪುಸ್ತಕಗಳಲ್ಲಿ - ಆಧುನಿಕಪೂರ್ವ ಕನ್ನಡದ ಮಹತ್ಕೃತಿಗಳೂ (ಟಿಪ್ಪಣಿಗಳೊಂದಿಗೆ) ಹಾಗೂ ಹೊಸಗನ್ನಡದ ಪ್ರಮುಖ ಲೇಖಕರ ಆಯ್ದ ಕಥೆ-ಕವನ-ಪ್ರಬಂಧಗಳೂ ಮತ್ತು ಕೆಲವು ಕನ್ನಡೇತರ ಲೇಖಕರ ಆಯ್ದ ಬರಹಗಳ ಸಂಗ್ರಹಗಳೂ ಸೇರಿವೆ. ಆಯಾ ಲೇಖಕರನ್ನು ಮೊದಲ ಬಾರಿಗೆ ಪರಿಚಯಿಸಿಕೊಳ್ಳುವವರಿಗೆ ಉಪಯುಕ್ತವಾಗುವಂತೆ ಈ ಪುಸ್ತಕಗಳ ವಸ್ತು-ವಿನ್ಯಾಸಗಳನ್ನು ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗುವ ಜತೆಗೆ, ಈ ಮಾಲಿಕೆಯ ಪುಸ್ತಕಗಳನ್ನು ನೀನಾಸಮ್ ಪ್ರತಿಷ್ಠಾನವು ನಡೆಸುತ್ತಿರುವ ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಪಠ್ಯಗಳಾಗಿಯೂ ಬಳಸಲಾಗುತ್ತದೆ.

 

ABOUT THE AUTHOR

ಪ್ರಸಿದ್ಧ ಜೈನಕವಿಯಾದ ಜನ್ನನು ಹೊಯ್ಸಳ ವೀರಬಲ್ಲಾಳನ ಆಸ್ಥಾನಕವಿಯಾಗಿದ್ದ; ಅವನಿಂದ ಕವಿಚಕ್ರವರ್ತಿ ಎಂಬ ಬಿರುದು ಪಡೆದಿದ್ದ. ಬಲ್ಲಾಳನ ಮಗ ನರಸಿಂಹನ ಕಾಲದಲ್ಲಿ ಕವಿಯೂ ದಂಡಾಧಿಕಾರಿಯೂ ಆಗಿದ್ದ. ಕಾಣೂರ್ಗಣದ ರಾಮ ಚಂದ್ರಯತಿ ಇವನ ಗುರು. ಶಬ್ದಮಣಿದರ್ಪಣವನ್ನು ಬರೆದ ಕೇಶಿರಾಜ ಇವನ ಸೋದರಳಿಯ. ಇವನು ಹಲವಾರು ಶಾಸನಗಳನ್ನೂ ‘ಯಶೋಧರ ಚರಿತೆ’ ಮತ್ತು ‘ಅನಂತನಾಥ ಪುರಾಣ’ ಎಂಬ ಎರಡು ಕಾವ್ಯಗಳನ್ನೂ ಬರೆದಿದ್ದಾನೆ. ಇವನ ಕಾಲ ೧೩ನೇ ಶತಮಾನ. ಇವನ ಗ್ರಂಥಗಳಲ್ಲೇ ತಿಳಿದುಬರುವ ಪ್ರಕಾರ ಯಶೋಧರ ಚರಿತೆಯನ್ನು ಕ್ರಿ.ಶ. ೧೨೦೯ರಲ್ಲೂ ಅನಂತನಾಥ ಪುರಾಣವನ್ನು ೧೨೩೦ರಲ್ಲೂ ಆತ ಬರೆದು ಮುಗಿಸಿದ. ವಾದಿರಾಜ ಸೂರಿಯು ಸಂಸ್ಕೃತದಲ್ಲಿ ರಚಿಸಿದ ‘ಯಶೋಧರ ಚರಿತ’ವು ಜನ್ನನಿಗೆ ಆಧಾರಗ್ರಂಥವಾಗಿದೆ. ಈ ಕೃತಿಯು ಮೂಲತಃ ಜೀವದಯಾಷ್ಟಮಿ ಎಂಬ ವ್ರತದಲ್ಲಿ ಪಠಣ ಮಾಡುವ ಒಂದು ಪಠ್ಯವಾಗಿ ಕಲ್ಪಿತವಾದದ್ದು. ಕವಿಕಲ್ಪಲತಾ ಮಂದಾರ, ಸುಕವಿ ಭಾಳಲೋಚನ ಮುಂತಾದವು ಇವನ ಇತರ ಬಿರುದುಗಳು.


ಪುಟಗಳು: 103

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !