
ರಾಮಯ್ಯ ಮೇಷ್ಟ್ರು :
ನಗರದಲ್ಲಿ ಬೆಳೆಯುತ್ತಿರುವ ಮೊಮ್ಮಕ್ಕಳು, ರಜೆಗೆ ಹಳ್ಳಿಯ ಅಜ್ಜನ ಮನೆಗೆ ಬಂದಾಗ, ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಆ ಸಂತೋಷ ಮಾಸಿಹೋಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಮನೆ ಎದುರಿಗಿದ್ದ ಹಲಸಿನ ಮರಕ್ಕೆ ಮೆಟ್ಟಿಕೊಂಡಿದ್ದ ಪಿಶಾಚಿ, ಮಕ್ಕಳನ್ನೂ, ದೊಡ್ಡವರನ್ನೂ ಬಿಡದೇ ಕಾಡುತ್ತಿತ್ತು. ಅದರ ಕಾಟದಿಂದ ಮುಕ್ತಿಹೊಂದಲು ಮೇಷ್ಟ್ರು ಮೊರೆಹೊಕ್ಕಿದ್ದು ಮೂಢ ನಂಬಿಕೆಯನ್ನ. ನಿಜಕ್ಕೂ ಆ ಮರದಲ್ಲಿ ಇದ್ದ ರಾಕ್ಷಸ, ಪಿಶಾಚಿ ಯಾವುದು? ನಡೆಯುತ್ತಿದ್ದ ಘಟನೆಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದಾಗ ಅನಾವರಣಗೊಂಡ ಸತ್ಯಗಳೇನು ?