Click here to Download MyLang App

ಚೂರಿಕಟ್ಟೆ ಅರ್ಥಾತ್ ಕಲ್ಯಾಣಪುರ (ಇಬುಕ್)

ಚೂರಿಕಟ್ಟೆ ಅರ್ಥಾತ್ ಕಲ್ಯಾಣಪುರ (ಇಬುಕ್)

e-book

ಪಬ್ಲಿಶರ್
ಅಕ್ಷರ ಕೆ.ವಿ.
ಮಾಮೂಲು ಬೆಲೆ
Rs. 50.00
ಸೇಲ್ ಬೆಲೆ
Rs. 50.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಈ ಊರಿಗೆ ಎರಡು ಹೆಸರು. ಚೂರಿಕಟ್ಟೆ ಅರ್ಥಾತ್ ಕಲ್ಯಾಣಪುರ. ಬಸ್ಸಿನ ಬೋರ್ಡಿನ ಮೇಲೆ ಕಲ್ಯಾಣಪುರ... ಯಾಕೆ ಹೀಗೆ ಅನ್ನುತ್ತೀರಾ? ಅದಕ್ಕೆ ಒಂದು ದೊಡ್ಡ ಪುರಾಣವೇ ಇದೆ. ಈ ಊರಿನ ಮೂಲ ದೇವರು ಶಂಭುಲಿಂಗೇಶ್ವರ. ಈಗ ನೂರಾರು ವರ್ಷಗಳ ಹಿಂದೆ ಆ ಶಂಭುಲಿಂಗೇಶ್ವರನ ಒಂದು ಗಣ ಈ ಕಟ್ಟೆಯಮೇಲೇ ಸ್ಥಾಪನೆಯಾಗಿತ್ತಂತೆ. ಆಗ ಜನರೆಲ್ಲ ಕೋಳಿ ಕುರಿ ತಂದು ಅದನ್ನು ಹರಿತವಾದ ಚೂರಿಯಲ್ಲಿ ಸೀಳಿ ಆ ಗಣಕ್ಕೆ ಬಲಿ ಕೊಡುತ್ತಿದ್ದರಂತೆ. ಆಮೇಲೆ ಬ್ರಿಟಿಷರ ಕಾಲದಲ್ಲಿ ಕುದುರೆಯ ಮೇಲೆ ಬಂದು ಒಬ್ಬ ಕಲೆಕ್ಟರನಿಗೆ ಇಲ್ಲೇ ಹಾದಿ ತಪ್ಪಿತು ಅನ್ನೋ ಕಾರಣಕ್ಕೆ ಆತ ಇಲ್ಲಿ ಒಂದು ಕೈಮರ ಹಾಕಿಸಿದನಂತೆ. ಸರಿ, ಗಣಕ್ಕೆ ಮೈಲಿಗೆ ಆಯಿತು ಅಂತ ಊರಿನವರು ಆ ಗಣವನ್ನು ಎತ್ತಿಕೊಂಡು ಹೋಗಿ ಈಗ ಊರನಡುವೆಯೇ ಇರುವ ಶಂಭುಲಿಂಗನ ಗುಡಿಯ ಬದಿಗೆ ನಿಲ್ಲಿಸಿದರಂತೆ. ಆಮೇಲೆ ಊರು ಆ ಕಡೆಗೇ ಬೆಳೆಯುತ್ತ ಹೋಯಿತು; ಶಂಭುಲಿಂಗನ ಗುಡಿ ಊರಿನ ನಟ್ಟನಡುವಿಗೆ ಆಯಿತು. ಊರು ಬೆಳೆದ ಹಾಗೆ ಇತಿಹಾಸವೂ ಬೆಲೀತು; ಸಾತಂತ್ರ್ಯ ಬಂತು. ಆಗ ಊರಿನವರಿಗೆ ಈ ಚೂರಿಕಟ್ಟೆ ಅನ್ನೋ ಹೆಸರು ಅಪಶಕುನ ಅನ್ನೋ ಹಾಗೆ ಕಂಡಿದ್ದರಿಂದ ದೊಡ್ಡದೊಡ್ಡವರೆಲ್ಲಾ ಸೇರಿ ಸರ್ಕಾರಕ್ಕೆ ಒತ್ತಾಯ ಮಾಡಿ ಈ ಊರಿನ ಹೆಸರನ್ನು ಕಲ್ಯಾಣಪುರ ಅಂತ ಬದಲು ಮಾಡಿಸಿದರು. ಆದರೆ, ಚೂರಿಕಟ್ಟೆ ಅನ್ನೋ ಹೆಸರು ಅಳಿಸಲೇ ಇಲ್ಲ... ಈಗ ಒಂದೆರಡು ವರ್ಷದ ಈಚೆಗೆ ಈ ಹೆಸರಿಗೆ ಇನ್ನೋಂದು ಅರ್ಥ ಬರಲಿಕ್ಕೆ ಶುರು ಆಗಿದೆ. ಪ್ರತಿವರ್ಷ ಶಂಭುಲಿಂಗೇಶ್ವರ ಜಾತ್ರೆ ಶುರು ಆಗಬೇಕು, ಅಷ್ಟು ಹೊತ್ತಿಗೆ ಇಲ್ಲಿ ಹಿಂದು ಮುಸ್ಲಿಂ ಗಲಾಟೆ ಶುರು; ಹೆಣ ಬೀಳೋದಕ್ಕೆ ಆರಂಭ. ಇವರು ಅವರಿಗೆ ಚೂರಿ ಹಾಕೋದು, ಅವರು ಇವರನ್ನು ತಿವಿಯೋದು. ಒಟ್ಟಿನಲ್ಲಿ ಹೆಣ ಕಾಯೋದು ನಮ್ಮ ಹಣೆಬರಹ.

 

ಪುಟಗಳು: 68

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

 

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
J
John
Nice

Nice