Click here to Download MyLang App

ನಾಗತಿಹಳ್ಳಿ ಚಂದ್ರಶೇಖರ,  ಅಮೆರಿಕಾ ಅಮೆರಿಕಾ - ಸಿನಿಮಾ ಚಿತ್ರಕಥೆ,  nagatihalli chandrashekhar,  nagatihalli chandrashekar,  Nagathihalli Chandrashekhar,  nagathihalli chandrashekar,  America America,

ಅಮೆರಿಕಾ ಅಮೆರಿಕಾ - ಸಿನಿಮಾ ಚಿತ್ರಕಥೆ (ಇಬುಕ್)

e-book

ಪಬ್ಲಿಶರ್
ನಾಗತಿಹಳ್ಳಿ ಚಂದ್ರಶೇಖರ್
ಮಾಮೂಲು ಬೆಲೆ
Rs. 175.00
ಸೇಲ್ ಬೆಲೆ
Rs. 175.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ

Publisher: Abivyakti Samskrutika Vedike


ನಾಗತಿಹಳ್ಳಿ ತಮ್ಮ ಬರಹಗಳಲ್ಲಿ ಒಮ್ಮೆ ಕವಿಯಾಗಿ, ಇನ್ನೊಮ್ಮೆ ಕಥೆಗಾರನಾಗಿ, ಅಲ್ಲಿ ಇಲ್ಲಿ ಆತ್ಮಶೋಧಕನಾದ ಚಿಂತಕನಾಗಿ, ಮುಚ್ಚುಮರೆಯಿಲ್ಲದ ಪ್ರೇಮಿಯಾಗಿ ನಿರೀಶ್ವರವಾದಿಯಾಗಿದ್ದೂ ತಾಯಿ-ತಂದೆಯ ಪ್ರೀತಿಗಾಗಿ ತನ್ನ ಹಳ್ಳಿಯಲ್ಲಿ ದೇವರ ಮಂಟಪ ಕಟ್ಟಿಸುವವನಾಗಿ ನಮಗೆ ಎದುರಾಗುತ್ತಾರೆ. ಈತ ನಮ್ಮ ಕಾಲದ ಚುರುಕಾದ ಕಣ್ಣಿನ, ಚುರುಕಾದ ಮಾತಿನ ಆಕರ್ಷಕ ಬರಹಗಾರ. ಕನ್ನಡ ಓದುಗರನ್ನು ಮಹತ್ವದ ಕೊಡುಗೆಗೆ ಕಾಯಿಸುತ್ತಿರುವ ಬರಹಗಾರ. ಇವರು ತೆರೆದಿಡುವ ಶೋಧಕ ಚಿಂತನಾಶೀಲತೆ ಇವರನ್ನು ಕಾಪಾಡುತ್ತದೆ ಎಂಬ ಭರವಸೆ ಈ ಕೃತಿಯ ನಿವೇದನೆಗಳಲ್ಲಿ ಎದ್ದುಕಾಣುವ ಗುಣ.

- ಯು.ಆರ್. ಅನಂತಮೂರ್ತಿ

ನಾಗತಿಹಳ್ಳಿ ಚಂದ್ರಶೇಖರ್ ನಮ್ಮ ನಾಡಿನ ಶ್ರೇಷ್ಠ ಪ್ರತಿಭೆಗಳಲ್ಲಿ ಒಬ್ಬರು. ಎಲ್ಲರಿಗಿಂತ ಭಿನ್ನವಾದ ಪ್ರತಿಭೆ ಉಳ್ಳವರು. ತನ್ನದೇ ಆದ ಗದ್ಯ ಶೈಲಿಯನ್ನು ರೂಪಿಸಿಕೊಂಡು ಕತೆಗಳನ್ನು ರಚಿಸಿದವರು. ಈತ ನಮ್ಮ ಕನ್ನಡದ ಅತ್ಯುತ್ತಮ ಕಥನಕಾರರಾದ ತೇಜಸ್ವಿ, ಲಂಕೇಶರಂತೆ ತನ್ನ ಶೈಲಿಯಿಂದಲೇ ಮೆಚ್ಚುಗೆಯಾಗುವ ಕತೆಗಾರ.

- ಡಾ. ಚಂದ್ರಶೇಖರ ಕಂಬಾರ

ಹೆಂಗರುಳಿನ ಗಂಡೆದೆಯ ನಾಗತಿಹಳ್ಳಿ, ಸದಾ ಚಿಗುರು ಮೀಸೆ ಕೆಳಗೆ ಮುಗುಳ್ನಗೆಯ ಜಿನುಗುವಾತ. ಅಕ್ಷರಗಳಿಗೆ ತುಂಟ ಕಂಗಳನ್ನು ಮುಡಿಸುವಾತ. ಒದ್ದೆ ತುಟಿಗಳಿಗೆ ಪ್ರೇಮದ ಓನಾಮ ಕಲಿಸುವಾತ. ಹಿಡಿ ಕತೆಗಳ ದ್ವಾರ ನಾಡ ತುಂಬ ಮೆರೆದಾತ.

- ಕು. ವೀರಭದ್ರಪ್ಪ

ನಾಗತಿಹಳ್ಳಿಯವರ ಸಮಾಜ ಪ್ರೀತಿ ಅವರ ಬರವಣಿಗೆಯಲ್ಲಿ ಮಡುಗಟ್ಟಿದೆ. ಅವರ ಆರೋಗ್ಯಪೂರ್ಣ ಚಿಂತನೆ ಓದುಗರನ್ನು ಜಾಗೃತಿಗೊಳಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿಯ ಬರವಣಿಗೆಯನ್ನು ಓದಿದಾಗ ಉಂಟಾಗುವ ಸಂತೋಷಕ್ಕೆ ಪಾರವಿಲ್ಲ.

- ಡಾ. ಸಿದ್ಧಲಿಂಗಯ್ಯ

 

ನಾಗತಿಹಳ್ಳಿ ಚಂದ್ರಶೇಖರ್ ಸುಮ್ಮನೆ ಬರೆಯುವ ಪ್ಯೆಕಿಯಲ್ಲ. ತಾನು ಖಾಲಿಯಾಗುತಿದ್ದೇನೆ ಅಂತ ಅನ್ನಿಸಿದಾಗೆಲ್ಲ ಬರವಣಿಗೆ ನಿಲ್ಲಿಸಿ, ಮತ್ತೆ ತುಂಬಿಕೊಳ್ಳಲು ಕಾಲಿಗೆ ಚಕ್ರ ಕಟ್ಟಿಕೊಳ್ಳುವವರು. ಯಾವ ಹಾದಿಯಲ್ಲಾದರೂ ಸಾಗು, ಯಾವುದು ಕೂಡ ನಿನ್ನನ್ನು ಅಂತಿಮ ಉತ್ತರದತ್ತ ಒಯ್ಯಲಾರದು. ಆದರೆ ನೀನು ನಡೆಯೋ ದಾರಿಯಲ್ಲಿ ಆನಂದ ಇದೆಯಾ, ಸಂತೋಷ ಇದೆಯಾ ಕೇಳಿಕೋ.. ಯಾವ ದಾರಿಯಲ್ಲಿ ನಿನಗೆ ಸಂತೋಷ ಸಿಗುತ್ತದೆಯೋ ಅದು ನಿನ್ನ ದಾರಿ. ಇವರು ಕಲೆ ಮತ್ತು ಸಾಹಿತ್ಯದ ದಾರಿಯಲ್ಲಿ ಹೊರಟವರು.

ಮೇಷ್ಟ್ರು ಮೂಲತಃ ಕತೆಗಾರರು. ಜೊತೆಗೆ ಅಲೆಮಾರಿ, ಅದರೊಟ್ಟಿಗೆ ಸೂಕ್ಷ್ಮವಾಗಿ ನೋಡುವ ಕಣ್ಣು, ಕೇವಲ ಚಿಟ್ಟೆಗೆ ಮಾತ್ರ ಕೇಳಿಸುವ ಸದ್ದನ್ನು ಕೇಳಬಲ್ಲ ಕಿವಿ ಉಳ್ಳವರು. ನಾಗತಿಹಳ್ಳಿಯವರದ್ದು ಮೀರುವ ಕ್ರಮ. ಜೊತೆಗೇ ಒಳಗೊಳ್ಳುವ ಕ್ರಮ . ಇದು ಬಹಳ ಮುಖ್ಯ. ಎಷ್ಟೆಲ್ಲ ಪೆಟ್ಟುಗಳನ್ನು ತಿಂದೂ, ಎಷ್ಟೆಲ್ಲಾ ಯಾತನೆಗಳಿಗೆ ಪಕ್ಕಾಗಿಯೂ, ಎಷ್ಟೆಲ್ಲ ಅವಕಾಶಗಳಿಂದ ವಂಚಿತನಾಗಿಯೂ, ಗಾಂಧೀನಗರದ ನಡುವಲ್ಲಿದ್ದೂ ಜೀವವಿರೋಧಿ ಆಗದೇ ಉಳಿದಿರುವುದು ಸಾಧನೆ.

- ಜೋಗಿ

 

ಪುಟಗಳು: 206

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !