
ಬರಹಗಾರ: ಡಾ|| ಕೆ. ಶಿವರಾಮ ಕಾರಂತ
ಕಥೆಯ ಮೊದಲ ಪುಟದಲ್ಲಿ ಹೇಳಿದ ಹಾಗೆ ಈ ಕಥೆಯಲ್ಲಿ ಇಬ್ಬರು ಧರ್ಮರಾಯರು. ಆದರೆ ಇದರಲ್ಲಿ ಬರುವ ಸ್ತ್ರೀ ಪಾತ್ರಗಳು ಮಾತ್ರ ತುಂಬಾ ಮನಸಲ್ಲಿ ಇಳಿದು ಬಿಡುತ್ತವೆ. ಪದ್ಮಾವತಿ, ಮಹಾಲಕ್ಷ್ಮಿ ಮತ್ತು ಸರಸ್ವತಿ ಯಾರದು ಹೆಚ್ಚು ಯಾರದು ಕಡಿಮೆ ಅಂತ ಹೇಳುವ ಹಾಗಿಲ್ಲ ಅಷ್ಟೊಂದು ಕಷ್ಟ ನೋವು ಹೆಣ್ಣು ಜೀವಕ್ಕೆ ಇಷ್ಟೇನಾ ಅನಿಸತ್ತೆ. ಇವರೆಲ್ಲರ ಕಷ್ಟ ನಡುವೆ ಚಂದುವಿನ ಒಳ್ಳೆ ಮನಸು ಇಷ್ಟ ಆಗತ್ತೆ. ದಿನ ಜೀವನದಲ್ಲಿ ನಮ್ಮ ಮದ್ಯ ನಮ್ಮ ಮನೆಯಲ್ಲಿಯೇ ನಡೆಯುವ ಕೆಲವು ಸಂದರ್ಭ. ತಾಯಿಯ ಮನಸು ನೋಯಿಸೋ ಗಂಡು ಮಕ್ಕಳು ಈಗಲೂ ನಮ್ಮ ನಡುವೆ ಇದ್ದಾರೆ, ಗಂಡನ ಎದುರು ಹೆದರಿ ಬದುಕುವ ಹೆಣ್ಣು ತನ್ನ ಮಗಳ ಜೀವನ ನಾಶಕ್ಕೆ ಯಾವುದೋ ಮೂಲೆಯಲ್ಲಿ ಕಾರಣ ಆಗುತ್ತಾಳೆ. ಪೂರ್ತಿ ಪುಸ್ತಕದಲ್ಲಿ ಇಷ್ಟ ಆಗದ ಅಂಶ ಅಂದ್ರೆ ಎಲ್ಲ ಅನ್ನುವ ಪದದ ಕಡೆ ಯಾವುದು ಅಂತ ಆಗಿರೋದು, ಅದನ್ನ ತಿದ್ದಿ ಓದೋಕೆ ಸ್ವಲ್ಪ ಬೇಸರ ಆಯ್ತು. ಎರಡು ಸಂಸಾರದ ಕಥೆ ಒಂದಕ್ಕೊಂದು ಬೆಸೆದು ಕೊನೆಯವರೆಗೂ ಸಾಗುತ್ತದೆ.
- Prabhosha Acharya
ಕೃಪೆ
ಪುಟಗಳು: 331
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !