
ಆಕಾಶದಾಗೆ ಯಾರೋ ಮಾಯಗಾರನು :
ಸಂಪೂರ್ಣ ನಿರ್ಭಾವುಕ ಜೀವಿಗಳಾದ ಜ಼ೀಟಾ ರಟಿಕ್ಯೂಲ್ ಸೌರಮಂಡಲದ ಜೀವಿಗಳಿಗೆ, ಭೂಗ್ರಹದ ಜೀವಿಗಳ ಸಹಾಯದಿಂದ ಕೃತಕ ಸಂತಾನೋತ್ಪತ್ತಿ ಮಾಡಿ, ತಮ್ಮ ತಳಿ ಉಳಿಸಿಕೊಳ್ಳುವ ತವಕ. ಅವರ ಪ್ರಯೋಗ ಪಶುಗಳಾಗಿದ್ದು ಮಂಗಳೂರಿನ ಮುಗ್ಧ ದಂಪತಿ ಗಗನ್ ಮತ್ತು ಭಾನುಮತಿ. ದಂಪತಿಯನ್ನು ಅಪಹರಿಸಿದ್ದೂ ಅಲ್ಲದೆ, ಅನುಮತಿ ಇಲ್ಲದೆ ಅವರ ವೀರ್ಯಾಣು ಅಂಡಾಣುಗಳಿಂದ ಭ್ರೂಣ ತಯಾರಿಸಿ, ಕೆಲಸ ಮುಗಿದೊಡನೆ ಹಣ್ಣಿನ ಸಿಪ್ಪೆಯಂತೆ ವಾಪಸ್ಸು ಭೂಮಿ ಮೇಲೆ ಅತಂತ್ರವಾಗಿ ಬಿಟ್ಟು ಹೋದರು. ಯಾವ ರಾಕ್ಷಸೀ ಸಂತತಿಯ ಉತ್ಪಾದನೆಯಲ್ಲಿ ತೊಡಗಿದ್ದಾರೆ ಆ ಜೀವಿಗಳು? ಇತ್ತ ತಮ್ಮ ಕಥೆಯನ್ನು ವೈದ್ಯರ ಎದುರು ಹೇಳಿಕೊಂಡರೂ ಯಾರೂ ನಂಬದ ಸ್ಥಿತಿಯಲ್ಲಿ ಅವಮಾನ ಎದುರಿಸುತ್ತಿರುವ ದಂಪತಿ. ಎಲ್ಲಿಗೆ ಹೋಗಿ ತಲುಪುತ್ತದೆ ಈ ಅನ್ಯಗ್ರಹ ಜೀವಿಗಳ ಗುಪ್ತ, ಅಮಾನುಷ ಕಾರ್ಯಾಚರಣೆ?