
ಒಡಲಾನಲ :
ಸಹನಾಮಯಿ ಭೂಮಿ, ಮಾನುಷ್ಯನ ಅನಾಚಾರಗಳನ್ನು ಎಲ್ಲಿವರೆಗೂ ಸಹಿಸಬಹುದು? ಅವಳ ಒಡಲನ್ನೇ ಬಗೆದು, ಆಳದಲ್ಲಿ ನಿರಂತರವಾಗಿ ಧಗಧಗಿಸುತ್ತಿರುವ ಬೆಂಕಿಯನ್ನು ಹೊರಕ್ಕೆ ಚಿಮ್ಮಿಸಿ, ಅದರಿಂದ ವಿದ್ಯುತ್ ಉತ್ಪಾದಿಸುವ ಮೈನವಿರೇಳಿಸುವ ಕಥೆ 'ಒಡಲಾನಲ'. ಉಪಾಯವೇನೋ ಚೆನ್ನಾಗಿದೆ ಆದರೆ ಅದರ ಪರಿಣಾಮ ಮಾತ್ರ ಎದೆನಡುಗಿಸುವಂಥದ್ದು. ಭೂಮಿಯ ಪದರಗಳಾಳಕ್ಕೆ ಹೊಕ್ಕು, ವಾತಾವರಣದ ಸ್ವಾಸ್ಥ್ಯ ಕೆಡಿಸಬಹುದಾದ ಈ ಯೋಜನೆಗೆ ಭೂತಾಯಿ ಹೇಗೆ ಪ್ರತಿಕ್ರಿಯಿಸುತ್ತಾಳೆ? ತನ್ನ ಮಕ್ಕಳನ್ನು ಪೊರೆಯುತ್ತಾಳೆಯೇ ಇಲ್ಲ ಶಿಕ್ಷಿಸುತ್ತಾಳೆಯೇ ಎಂಬ ಕುತೂಹಲ ಕಡೆವರೆಗೂ ಕಾಡುತ್ತದೆ.