Click here to Download MyLang App

ಕುವೆಂಪು,  ಕಾನೀನ,  kuvempu,  Kanina,

ಕಾನೀನ (ಇಬುಕ್)

e-book

ಪಬ್ಲಿಶರ್
ಕುವೆಂಪು
ಮಾಮೂಲು ಬೆಲೆ
Rs. 29.00
ಸೇಲ್ ಬೆಲೆ
Rs. 29.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana

 

ಕರ್ಣನ ಕತೆಯನ್ನು ಇಟ್ಟುಕೊಂಡು ಕುವೆಂಪು ಅವರು ರಚಿಸಿದ ನಾಟಕಗಳಲ್ಲೊಂದು. ಹದಿನಾರು ಪಾತ್ರ ಮತ್ತು ಐದು ದೃಶ್ಯಗಳಲ್ಲಿ ಮೂಡಿರುವ ಈ ಕತೆ ದುರಂತ ನಾಯಕ ಕರ್ಣನ ಕತೆಯನ್ನು ಓದುಗರ ಎದೆಯಲ್ಲಿ ಆಪ್ತವಾಗಿ ನಾಟಿಸುತ್ತದೆ.

 

ಪುಟಗಳು: 32

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಸತ್ಯನಾರಾಯಣ ಬಿ.ಆರ್.‌
’ಕುಲವು ಜನನದೊಳಿಲ್ಲ; ಗುಣದೊಳಿಹುದು’

ಕಾನೀನ: ಪರಶುರಾಮ-ಕರ್ಣ
ಕುವೆಂಪು ಅವರಿಗೆ ವಿಶ್ವಾಮಿತ್ರ ಮತ್ತು ಪರಶುರಾಮರ ಕಡೆಗೆ ವಿಶೇಷವಾದ ಸೆಳೆತವಿದ್ದಂತೆ ಕಾಣುತ್ತದೆ. ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ ತಮ್ಮ ರಸತತ್ವನಿರೂಪಣೆಯನ್ನು ವಿಶ್ವಾಮಿತ್ರನ ಬಾಯಲ್ಲಿ ಮಾಡಿಸುತ್ತಾರೆ. ಧನ್ವಂತರಿ ಚಿಕಿತ್ಸೆ ಕಥೆಯಲ್ಲಿ ವಿಶ್ವಾಮಿತ್ರ ಪರಶುರಾಮ ಇಬ್ಬರೂ ರೈತನ ಎದೆಯ ಮೇಲಿನ ಬಾರವನ್ನಿಳಿಸಲು ಸಂಕಲ್ಪಬದ್ಧರಾಗುವುದನ್ನು ಕಾಣಬಹುದು. ಕಾನೀನ ನಾಟಕದಲ್ಲಿನ ಪರಶುರಾಮ ಪಾತ್ರ ಮೂಲಕ್ಕಿಂತ ತೀರಾ ಭಿನ್ನವಾಗಿ ನಿರೂಪಿತವಾಗಿದೆ. ಕರ್ಣನ ಪಾತ್ರವೂ ಅಷ್ಟೆ. ಮೂಲದಲ್ಲಿ, ಕರ್ಣ ಪರಶುರಾಮನಲ್ಲಿಗೆ ಬರುವಾಗಲೇ, ಸುಳ್ಳು ಹೇಳಲು ನಿರ್ಧರಿಸಿಕೊಂಡು ಬಂದು, ಬ್ರಾಹ್ಮಣ ಎಂದು ಸುಳ್ಳು ಹೇಳಿ ವಿದ್ಯೆ ಕಲಿಯುತ್ತಾನೆ. ಬ್ರಾಹ್ಮಣನಲ್ಲವೆಂದು ತಿಳಿದಾಗ ಪರಶುರಾಮ ಶಾಪವನ್ನೂ ಕೊಡುತ್ತಾನೆ. ಆದರೆ, ಇಲ್ಲಿ ಕರ್ಣ ಸುಳ್ಳು ಹೇಳುವ ಪ್ರಸಂಗವೇ ಬರುವುದಿಲ್ಲ. ಕರ್ಣ ತನ್ನ ಊರಿನಲ್ಲಿದ್ದಾಗಲೇ ಆಕಸ್ಮಿಕವಾಗಿ ಅಲ್ಲಿ ಬಂದ ಪರಶುರಾಮನ ಭೇಟಿಯಾಗಿದೆ. ತಾನು ಗುರುವನ್ನು ಹುಡುಕಿಕೊಂಡು ಬಂದಾಗ, ಮೊದಲು ಭೇಟಿಯಾಗುವುದು ಪರಶುರಾಮನ ಶಿಷ್ಯರನ್ನು. ಅದರಲ್ಲಿ ಒಬ್ಬ ಬ್ರಹ್ಮಚಾರಿ ಕರ್ಣನ ಕುಲವನ್ನು ತಿಳಿದು ’ಕುಲವು ಜನನದೊಳಿಲ್ಲ; ಗುಣದೊಳಿಹುದು’ ಎಂಬ ಗುರುಗಳ ಮಾತನ್ನು ಉದಾಹರಿಸುತ್ತಾನೆ. ಕರ್ಣನಿಗೆ ಪರಶುರಾಮ ಗುರುವಾಗಿ ವಿದ್ಯೆ ಕಲಿಸುತ್ತಾನೆ. ಕರ್ಣ ಸುಳ್ಳು ಹೇಳವುದು ಇಲ್ಲದ್ದರಿಂದ ಪರಶುರಾಮ ಶಾಪ ಕೊಡುವ ಪ್ರಸಂಗವೂ ಬರುವುದಿಲ್ಲ. ಗುರುದಕ್ಷಿಣೆಯನ್ನು ಏನು ಕೊಡಲಿ ಎಂದ ಕರ್ಣನಿಗೆ ಪರಶುರಾಮ ’ಸತ್ಯವನ್ನು ಬಿಡಬೇಡ, ಆಶ್ರಯದಾತನಿಗೆ ದ್ರೋಹ ಮಾಡಬೇಡ, ದೀನರನ್ನು ತುಳಿಯಬೇಡ, ದೂರ್ತರಿಗೆ ಮಣಿಯಬೇಡ, ಯುದ್ಧಭುಮಿಯಲ್ಲಿ ಧರ್ಮಯುದ್ಧವನ್ನೇ ಮಾಡಬೇಕು, ಶತ್ರುಗಳೀಗೆ ಬೆನ್ನು ತೋರಿಸಬೇಡ, ಸಿಂಹದಂತೆ ಬಾಳು...’ ಮುಂತಾಗಿ ಹೇಳಿ ಅದೇ ನನಗೆ ನೀನು ಕೊಡುವ ಗುರುದಕ್ಷಿಣೆ ಎನ್ನುವಲ್ಲಿಯೂ ಪರಶುರಾಮನ ಪಾತ್ರ ನವೀನವಾಗಿ ಮೂಡಿಬಂದಿದೆ.
ಜಲಗಾರ, ಶೂದ್ರತಪಸ್ವಿ, ಬೆರಳ್ ಗೆ ಕೊರಳ್ ನಾಟಕಗಳಲ್ಲಿ ವರ್ಣಾಶ್ರಮ ಪದ್ಧತಿಗೆ ವ್ಯಕ್ತವಾಗಿರುವ ವಿರೋಧದ ಮೊನಚು ಇಲ್ಲಿಲ್ಲ. ಬಹುಶಃ ಈ ನಾಟಕ ಎರಡು ಕಾಲಘಟ್ಟದಲ್ಲಿ ರಚಿತವಾಗಿರುವುದು, ಮತ್ತು ಆ ವಿರೋಧ ವ್ಯಕ್ತವಾಗುತ್ತಿರುವುದು ಮೇಲ್ವರ್ಗದವನಾದ ಪರಶುರಾಮನಿಂದ ಎಂಬುದು ಕಾರಣವಿರಬಹುದು. ಆ ಕಾಲಘಟ್ಟಗಳ ನಡುವೆ ಸುಮಾರು ನಲವತ್ತೈದು ವರ್ಷಗಳ ಅಂತರವಿರುವುದು ಕಾರಣವೆನ್ನಿಸುತ್ತದೆ.