Click here to Download MyLang App

ಮಹಾಬಲೇಶ್ವರ ರಾವ್,  ಮರಿ ಕುದುರೆಯ ಮೈಸೂರು ಕನಸು (ಆಡಿಯೋ ಬುಕ್),  ಮರಿ ಕುದುರೆಯ ಮೈಸೂರು ಕನಸು,    ಕ್ಲಿಂಗ್ ಜಾನ್ಸನ್,  Mari Kudureya Mysuru Kanasu (Audio Book),  Mari Kudureya Mysuru Kanasu,  Mahabaleshwara Rao,  King Johnson,  Dr. Mahabaleshwara Rao,

ಮರಿ ಕುದುರೆಯ ಮೈಸೂರು ಕನಸು (ಆಡಿಯೋ ಬುಕ್)

audio book

ಪಬ್ಲಿಶರ್
ಡಾ|| ಮಹಾಬಲೇಶ್ವರ ರಾವ್
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಓದಿದವರು: ಧ್ವನಿಧಾರೆ ಮಿಡಿಯಾ ತಂಡ 

ಆಡಿಯೋ ಪುಸ್ತಕದ ಅವಧಿ : 4 ಗಂಟೆ 7 ನಿಮಿಷ

 

ಲೇಖಕರು:

ಕ್ಲಿಂಗ್ ಜಾನ್ಸನ್

ಕನ್ನಡ ರೂಪಾಂತರ: ಡಾ|| ಮಹಾಬಲೇಶ್ವರ ರಾವ್

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications 

ಮರಿಕುದುರೆ ಮೈಸೂರು ಕನಸು ಆಡಿಯೋ ಬಿಡುಗಡೆಯಲ್ಲಿ

 

ಈ ಕಾದಂಬರಿಯ ವೈಶಿಷ್ಟ್ಯವೆಂದರೆ ಕಥೆಯ ನಾಗಾಲೋಟ. ಉದಕಮಂಡಲದಿಂದ ಪ್ರಾರಂಭವಾದ ಮರಿ ಕುದುರೆ ಕ್ಲೀಯ ಕನಸಿನ ಪಯಣ ಮರಳಿ ಉದಕಮಂಡಲಕ್ಕೆ ಹೊರಡುವ ತನಕ ಶರವೇಗದಲ್ಲಿ ಸಾಗುತ್ತದೆ. ಈ ಪಯಣದಲ್ಲಿ ಅಗ್ನಿಶಾಮಕ ದಳದವರು, ಕಾಳಿಂಗ ಸರ್ಪಗಳು, ಬೀರಪ್ಪನ್ ಹಾಗೂ ಅವನ ಸಹಚರರು, ಸುಭದ್ರಾ ಎಂಬ ಆನೆ, ಕಾಡಿನ ಅಧಿಕಾರಿಗಳು, ಹೇಸರಗತ್ತೆಗಳು, ಮೈಸೂರು ಅರಮನೆ, ಅಲ್ಲಿನ ರಾಜ ಸೇವಕರು, ರಾಜ, ರಾಣಿ, ರಾಜಮಾತೆ, ನಗರದ ರಸ್ತೆಗಳು, ದಸರೆಯ ಉತ್ಸವ ಹಾಗೂ ಜನಸಾಗರ ಎಲ್ಲವೂ ಪಾತ್ರಗಳಾಗಿ ಬಂದುಹೋಗುತ್ತವೆ.

ವಿಶೇಷ ಸಂಗತಿ ಎಂದರೆ ‘ಪಂಚತಂತ್ರ’ದ ಕತೆಗಳ ಹಾಗೆ ಈ ಕಾದಂಬರಿಯಲ್ಲಿ ಬರುವ ಎಲ್ಲ ಪ್ರಾಣಿ ಪಕ್ಷಿಗಳು ತಮ್ಮ ತಮ್ಮಲ್ಲಿ ಮಾತನಾಡುವುದರ ಜೊತೆಗೆ ಮನುಷ್ಯರ ಜೊತೆಗೂ ಮಾತನಾಡುತ್ತವೆ; ಮನುಷ್ಯರೂ ಈ ಪ್ರಾಣಿಗಳ ಜೊತೆ ಪ್ರೀತಿ ಸ್ನೇಹದಿಂದ ಮಾತನಾಡುತ್ತಾರೆ. ಬಹಳ ಮುಖ್ಯವಾದ ಸಂಗತಿ ಎಂದರೆ ಇಂದು ಮನುಷ್ಯರಲ್ಲಿ ಬಹಳ ವಿರಳವಾಗಿರುವ ಪ್ರೀತಿ ಸ್ನೇಹ ಮತ್ತು ಸಹಕಾರ ಈ ಕಾದಂಬರಿಯಲ್ಲಿನ ಪ್ರಾಣಿಗಳಲ್ಲಿ ಎದ್ದುಕಾಣುತ್ತದೆ. ಆನೆಯಾಗಲಿ, ಸಿಂಹವಾಗಲಿ, ಸರ್ಪವಾಗಲಿ ಇಲ್ಲಿ ದ್ವೇಷವನ್ನು ಕಾರುವುದಿಲ್ಲ. ಬದಲಾಗಿ ಒಂದು ಇನ್ನೊಂದರ ಜೊತೆ ಪೂರ್ಣ ಮನಸ್ಸಿನಿಂದ ಸಹಕರಿಸುತ್ತದೆ. ಪ್ರಾಯಃ ಈ ಮೌಲ್ಯವನ್ನು ನಾವು ಮನುಷ್ಯರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕಾದಂಬರಿಕಾರರು ಸೂಚಿಸುತ್ತಿರುವಂತಿದೆ. ಸಂಕಲ್ಪ ಬಲ, ಕಠಿಣ ಪರಿಶ್ರಮ, ಎಡರುತೊಡರುಗಳನ್ನು ಎದುರಿಸುವ ಛಾತಿಯಿದ್ದರೆ ಕಂಡ ಕನಸುಗಳನ್ನು ನನಸು ಮಾಡಬಹುದು, ಇಲ್ಲಿ ಯಾವುದೂ ಅಸಾಧ್ಯವಲ್ಲವೆಂದು ಕಾದಂಬರಿಕಾರರು ಈ ಕಾದಂಬರಿಯ ಮುಖೇನ ಬೊಟ್ಟಿಟ್ಟು ತೋರುತ್ತಿದ್ದಾರೆ ಎಂದು ಭಾಸವಾಗುತ್ತದೆ.

 

- ಡಾ.ಮಹಾಬಲೇಶ್ವರ ರಾವ್

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

 

Customer Reviews

Based on 8 reviews
100%
(8)
0%
(0)
0%
(0)
0%
(0)
0%
(0)
Y
Yashwanth Krishna
Excellently written

Fantastically written and took me to my childhood days. Well-done Kling and Team. Proud of you 👍🏼

N
Naveen Shenoy
I dint get audio book but amount deducted

I havr paid the money but i dint get audio book when i called on the number which is in web site they replied in whats app they have sent the book (hard copy instead audio) but so far i dint recive niether audio nor the book

K
Kling Johnson
A wonderful team and great books in collection. Amazing job Team Mylang

I thank Team Mylang for this beautiful e book and audio book production. Expecting more good audio books ahead. Good job Mylang

P
Prashanth M
ಒಂದು ರೋಚಕ ಪಯಣ

ನಿಜಕ್ಕೂ ಈ ಪುಸ್ತಕವೊಂದು ಮಾಯಾಲೋಕವನ್ನೇ ಕಣ್ಣೆದುರಿಗೆ ತೆರೆದಿಡುತ್ತದೆ‌. ಮರಿಕುದುರೆಯ ಕನಸು ಕಥೆ ಕೇಳುತ್ತಾ ಕೇಳುತ್ತಾ ನಮ್ಮ ಕನಸೂ ಆಗಿಬಿಡುತ್ತದೆ. ಕ್ಲೀ ಕನಸು ನನಸಾಗಬೇಕೆಂದು ಹರಸುವ ಸ್ನೇಹಿತರಲ್ಲಿ ನಾವೂ ಒಬ್ಬರಾಗಿಬಿಡುತ್ತೇವೆ. ಊಟಿಯಿಂದ ಮೈಸೂರಿಗೆ ಬರುವ ಪ್ರಯಾಣ ಹಾದಿಯಂತೂ ರೋಚಕವಾಗಿದೆ.

R
Raghavendra
Best children book

Best children book which tells the history of our cultural capital Mysooru in a interesting way