Click here to Download MyLang App

ತನ್ನ ತಾನ (ಇಬುಕ್)

ತನ್ನ ತಾನ (ಇಬುಕ್)

e-book

ಪಬ್ಲಿಶರ್
ತೇಜಸ್ವಿನಿ ಹೆಗೆಡೆ
ಮಾಮೂಲು ಬೆಲೆ
Rs. 49.00
ಸೇಲ್ ಬೆಲೆ
Rs. 49.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಗೋಮಿನಿ ಪ್ರಕಾಶನ

Publisher: Gomini Prakashana

 

ರಿಯಾಲಿಟಿ ಶೋ ಒಂದರಲ್ಲಿ ಆಕೆ ನೃತ್ಯ ಮಾಡುತ್ತಿದ್ದಳು. ತೀರ್ಪುಗಾರರ ಮೊಗದ ಮೇಲೆ ಆತಂಕ. ನೃತ್ಯ ಮುಗಿದಾಗ ನಿರಾಳವಾದೊಂದು ನಿಟ್ಟುಸಿರು. ನೀನು ನೃತ್ಯ ಮಾಡುವುದೇ ಒಂದು ಅಚ್ಚರಿ ಎಂದವರ ಸ್ವರ ಬೆರಗುವಡೆದಿತ್ತು. ನೋಡುತ್ತಿದ್ದ ವೀಕ್ಷಕರದ್ದು ಇದೇ ಪ್ರಶ್ನೆ. ತಣ್ಣಗೇ ಉತ್ತರಿಸಿದ್ದಳು: “ನಾನು ಕಳೆದುಕೊಂಡದ್ದು ನನ್ನದೊಂದು ಕಾಲು ಮಾತ್ರ, ಆತ್ಮವಿಶ್ವಾಸವನ್ನಲ್ಲ.” ಕುಳಿತವರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಆಕೆ ಮಾತು ಮುಂದುವರಿಸುತ್ತಾ “ಕಾಲೇಜಿನ ನೃತ್ಯ ಸ್ಪರ್ಧೆಯೊಂದರಲ್ಲಿ ಗೆದ್ದ ಬಹುಮಾನ ಸಮೇತ ನಾನು ಲಾರಿಯ ಚಕ್ರದಡಿ ಸಿಲುಕಿದ್ದೆ. ಪ್ರಜ್ಞೆ ಬಂದಾಗ ನಾನು ಜೀವ ಕಳೆದುಕೊಂಡಿಲ್ಲ ಎಂಬ ಸಂತೋಷ ಮಣ್ಣು ಪಾಲಾಗಿದ್ದು ನಾನು ಕಳೆದುಕೊಂಡ ಕಾಲನ್ನು ನೋಡಿ. ಯಾರ ಮುಖದಲ್ಲೂ ನಾನು ಬದುಕಿ ಬಂದ ಗೆಲುವಿರಲಿಲ್ಲ. ನನಗೂ ಹೀಗೆ ಬದುಕುವ ಬದಲು ಸತ್ತಾದರೂ ಹೋಗಬಾರದಿತ್ತೇ ಎಂದೆನ್ನಿಸಿತ್ತು. ಸೊಂಟದಿಂದಲೇ ತುಂಡಾಗಿದ್ದ ಅವಯವದ ಖಾಲಿ ಜಾಗ ನನ್ನನ್ನು ಅಣಕಿಸುತ್ತಿತ್ತು.  ನನ್ನ ಬದುಕು ಇನ್ನೇನಿದ್ದರು ನಾಲ್ಕು ಗೋಡೆಯ ಮಧ್ಯೆ ಎನ್ನುವುದು ನನ್ನನ್ನು ಕುಂದಿಸುತ್ತಿತ್ತು. ಇಂತಹುದೇ ಮನಸ್ಥಿತಿಯಲ್ಲಿ ಅದೊಂದು ದಿನ ಬಾಲ್ಕನಿಯಲ್ಲಿ ರಸ್ತೆಯಾಚೆಗೆ ಶೂನ್ಯ ನೋಟ ಬೀರುತ್ತಾ ಕುಳಿತಿದ್ದೆ. ರಸ್ತೆಯಲ್ಲಿ ಹೋಗುತ್ತಿದ್ದ ಬೀದಿ ನಾಯಿಯೊಂದು ನನ್ನ ಗಮನ ಸೆಳೆಯಿತು. ಅದು ಮುಂದಿನ ಎರಡು ಕಾಲುಗಳಲ್ಲಿ ಇಡೀ ಶರೀರವನ್ನು ಹೊತ್ತು ನಡೆಯುತ್ತಿತ್ತು. ಅದಕ್ಕೆ ಸಾಧ್ಯವಾದದ್ದು ನನಗೆ ಸಾಧ್ಯವಾಗದೇ...? ಅಂದೇ ತೀರ್ಮಾನಿಸಿಬಿಟ್ಟೆ. 

ಕೆಲವೊಮ್ಮೆ ನಮ್ಮ ಬದುಕಿನಲ್ಲಿ ನಾವು ಕನಸು ಮನಸಿನಲ್ಲೂ ಯೋಚಿಸಿಯೇ ಇರದಂತಹ ಘಟನೆಗಳು ಘಟಿಸಬಹುದು. ಕೆಲವೊಂದು ನಿವಾರಿಸಲು ಅಸಾಧ್ಯವಾದ, ಪರಿಹಾರ ಇಲ್ಲದಂತಹ ವಿಷಯಗಳನ್ನು ಎದುರಿಸಬೇಕಾಗಬಹುದು. ಹೇಗೆ ಇಂತಹ ವಿಷಮ ಪರಿಸ್ಥಿತಿಗಳನ್ನು ನಿಭಾಯಿಸುವುದು? ಯಾರು ಈ ವಿಷಾದದಿಂದ ನಮ್ಮನ್ನು ಹೊರಗೆಳೆಯುವವರು? ಯಾಕೆ ನಮಗೇ ಇಂತಹ ಶಿಕ್ಷೆ? ಎಂಬೆಲ್ಲಾ ಪ್ರಶ್ನೆಗಳು ಎದೆಯೊಳಗೆ ಮೂಡಿ ಮನುಷ್ಯನನ್ನು ನಿರ್ವಿಣ್ಣನನ್ನಾಗಿ ಮಾಡಬಹುದು. ಇಂತಹ ಕ್ಷಣಗಳಲ್ಲಿ ಅವನ ಕೈ ಹಿಡಿಯುವುದು ಆಶಾವಾದ ಮಾತ್ರ.

ಇಂತಹುದೇ ಆಶಾವಾದವನ್ನು ತೇಜಸ್ವಿನಿ ಹೆಗಡೆಯವರ ಜೀವನ ಮತ್ತು ಬರಹ ಎರಡರಲ್ಲೂ ಕಾಣುತ್ತೇವೆ. ಈ ಪುಸ್ತಕದ ಎಲ್ಲಾ ಬರಹಗಳು ಅವರು ಅನುಭವಿಸಿ ಬರೆದದ್ದು. ಜೊತೆಗೆ ಈ ಬರಹದಲ್ಲಿ ಅವರು ಕಾಯ್ದುಕೊಂಡ ಸಮತೋಲನ ಮನಸ್ಸಿಗೆ ಮೆಚ್ಚುಗೆಯಾಗುತ್ತದೆ. ಎಲ್ಲಿಯೂ ಕನಿಕರ ಬೇಡದ, ನಮ್ಮದನ್ನು, ನಮಗೆ ಸಿಗಲೇಬೇಕಾದ್ದನ್ನು, ನಮ್ಮದಾಗಿಸಿ ಎಂಬ ಧೋರಣೆ ಮಾತ್ರ ಅವರದ್ದು. ಇಲ್ಲಿನ ಹದಿನೇಳು ಬರಹಗಳಲ್ಲಿ ಬದುಕಿನ ಬಗೆಗಿನ ಅವರ ಆಶಾವಾದ ಅಕ್ಷರ ರೂಪಕ್ಕಿಳಿದು ನಮ್ಮ ನಿಮ್ಮೊಳಗೂ ಅದೇ ಆಶಾವಾದದ ಭಾವನೆಯನ್ನು ಬಿತ್ತುವ ಪ್ರಯತ್ನ ಮಾಡುತ್ತದೆ.

 

ಪುಟಗಳು: 72

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಪವಮಾನ್ ಅಥಣಿ
ಸಮಾಜದ ಕಣ್ಣು ತೆರೆಸುವ ಪುಸ್ತಕ!

ಇದೊಂದು ಅಪರೂಪದ ಪುಸ್ತಕ. ನಮ್ಮ ಸಮಾಜದಲ್ಲಿ ಅಂಗವಿಕಲತೆಯೊಂದಿಗೆ ಬಾಳುವುದರ ಮತ್ತು ಬಾಳನ್ನು ಸಾರ್ಥಕಗೊಳಿಸಿಕೊಳ್ಳುವುದರ first-person ನೋಟ ಈ ಪುಸ್ತಕದಲ್ಲಿದೆ. ಬರಹಗಾರ್ತಿ ತೇಜಸ್ವಿನಿಯವರು ಎಲ್ಲೆಲ್ಲಿಯೂ ಹತಾಶೆ, ಸಿಟ್ಟನ್ನು ತೋರಿಸದೆ ನಮ್ಮ ಸಮಾಜವು ಹೇಗೆ ಅಂಗವಿಕಲರನ್ನು ಮುಖ್ಯಧಾರೆಯೊಳಗೆ ಒಳಗೊಳ್ಳುವುದರಲ್ಲಿ ಎಡವಿದೆ ಎಂದು ತೋರಿಸಿದ್ದಾರೆ. ಆದರೆ ಜೊತೆ ಜೊತೆಗೆ ಜೀವ ಪೋಷಕ ಆಶಾವಾದವನ್ನು ಮುಂದಿಡುತ್ತಾ ಅಂಗ ಊನತೆಯನ್ನು ನಮ್ಮ ಕನಸುಗಳಿಗೆ ಅಡ್ಡ ಬರದಂತೆ ಹೇಗೆ ನೋಡಿಕೊಳ್ಳುವುದು ಅಂತಲೂ ತೋರಿಸಿ ಕೊಟ್ಟಿದ್ದಾರೆ. ಪುಸ್ತಕದ ಉದ್ದಕ್ಕೂ ಎದ್ದು ತೋರುವುದು ಅವರ ಧ್ವನಿಯಲ್ಲಿರುವ ಪ್ರಾಮಾಣಿಕತೆ, ವಾಸ್ತವ ಪ್ರಜ್ಞೆ ಮತ್ತು ಪಾಸಿಟೀವ್ ಥಿಂಕಿಂಗ್! ಅವರು ತಮ್ಮ ಬದುಕಿನ ಬೇರೆ ಬೇರೆ ಹಂತಗಳಲ್ಲಿ ಎದುರುಗೊಂಡ ವ್ಯಕ್ತಿಗಳು ಮತ್ತು ಸನ್ನಿವೇಶಗಳ ಮೂಲಕ ಒಂದು ಸರಳವೂ , ಗಟ್ಟಿಯೂ ಆದ ಬದುಕಿನ ಫಿಲಾಸಫಿಯನ್ನು ಕಟ್ಟಿ ಕೊಡುತ್ತಾ ಸಾಗುತ್ತಾರೆ. ಕೆಲವೊಮ್ಮೆ ನಾವುಗಳು ಎಷ್ಟು ಅರಿವೇ ಇಲ್ಲದೇ ಸಂವೇದನೆ ಇಲ್ಲದವರಾಗಿರುತ್ತೇವೆ ಎಂದು ತೋರಿಸುತ್ತ ಜಾಗೃತರಾಗುವಂತೆ ಮಾಡುತ್ತಾರೆ. ಉದಾಹರಣೆಗೆ ಅವರು 'ಎಲ್ಲೆಲ್ಲಿಯೂ ಮೆಟ್ಟಿಲುಗಳೇ' ಎನ್ನುವ ಮಾತನ್ನು ಹೇಳುವಾಗ, ನಾವು ಈ ಬಗ್ಗೆ ಕೊಂಚವೂ ಆಲೋಚಿಸುವುದಿಲ್ಲವಲ್ಲ ಎಂದೆನಿಸುವಂತೆ ಮಾಡುತ್ತಾರೆ. ನಮಗೆ ನಿರಪಾಯವಾಗಿ ಕಾಣುವ ಮೆಟ್ಟಿಲುಗಳು ಹೇಗೆ ಕೆಲವರ ಕನಸುಗಳನ್ನು ಕಿತ್ತುಕೊಳ್ಳಲು ಸಾಧ್ಯ ಎಂದು ಅರಿವಾದಾಗ ಸಮುದಾಯದ ಬಗ್ಗೆ ತಲೆಯೇ ಕೆಡಿಸಿಕೊಳ್ಳದ ನಮ್ಮ ನಡವಳಿಕೆಗಳ ಬಗ್ಗೆ ನಾಚಿಕೆಯಾಗುತ್ತದೆ. ಹಾಗಂತ ಪುಸ್ತಕದಲ್ಲಿ ಸಮಾಜವನ್ನು ದೂರುವ ಮಾತುಗಳೇ ತುಂಬಿವೆ ಅಂದುಕೊಳ್ಳಬೇಡಿ, ಖಂಡಿತ ಇಲ್ಲ! ಪುಸ್ತಕದ ಒಟ್ಟಾರೆ ಧ್ವನಿಯೇ ಸ್ವಾಭಿಮಾನ, ಆತ್ಮವಿಶ್ವಾಸ ಮತ್ತು ಆಶಾಭಾವದಿಂದ ಕೂಡಿದೆ. ಕನ್ನಡದಲ್ಲಿ ಇಂಥ ಪುಸ್ತಕಗಳು ವಿರಳ. ಎಲ್ಲರೂ ಓದಲೇಬೇಕಾದದ್ದು ಅನ್ನುವುದು ನನ್ನ ಅನಿಸಿಕೆ.