Click here to Download MyLang App

ಗಿಡ ಮರವಾದ ಕನಸು

ಗಿಡ ಮರವಾದ ಕನಸು

e-book

ಪಬ್ಲಿಶರ್
ಡಾ. ಅಜಿತ್ ಹರೀಶಿ
ಮಾಮೂಲು ಬೆಲೆ
Rs. 30.00
ಸೇಲ್ ಬೆಲೆ
Rs. 20.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಐ ಲೈಕ್ ದಿಸ್ ಮ್ಯಾನ್. ಎಲ್ಲೋ ಮೂಲೆಯಲ್ಲಿ ಕೂತು ಡಾಕ್ಟರಿಕೆ ಮಾಡುತ್ತಾ, ಕ್ರಿಕೆಟ್ ಕನವರಿಸ್ತಾ, ಒಳಗೊಳಗೇ ಹುಡುಗೀರ್ನ ನೋಡ್ತಾ, ಇಷ್ಟಪಡ್ತಾ ಅವಡುಗಚ್ಚುವ ಈ ಡಾಕ್ಟರ್ ಕವಿ - ನೋಡದಿದ್ರೂ ಪರಿಚಿತ. ಮೊದಲ ಕವಿತೆ ನಾನು ಪ್ರಕಟಿಸಿದಾಗ ಈತ ಬಚ್ಚಾ! ನಾನು ಕವಿಯಲ್ಲ. ಒಳ್ಳೆ ಕವಿತೆಗಳ ಶುದ್ಧ ಓದುಗ. ನನ್ನ ಪಾಲಿಗೆ ಬೇಂದ್ರೆಯೊಬ್ಬರೇ ಕವಿ. ನಾನೂ ಮೊದಲಿಗೊಂದಷ್ಟು ತಿಣುಕಿದೆ. ಅದು ಒಲಿಯಲಿಲ್ಲ. ಗದ್ಯ ನನ್ನ ಹೋಮ್ ಟರ್ಫ್. ಕೊಂಚ ಉರ್ದುವಿನಲ್ಲಿ ಕವಿತೆ ಬರೆದೆ. ಅದೂ ಮುಟ್ಟಾಯಿತು. ಫಾರ್ಚುನೇಟ್ಲಿ! ಅಜಿತ್ ಪದ್ಯಗಳ ಮೇಲೆ ಕಣ್ಣಾಡಿಸುತ್ತೇನೆ. ಬ್ರೈಟ್ ಅನ್ನಿಸಿದ್ದು ನೆನಪಿದೆ. ಕವಿ ತುಂಟತನ ಕಳೆದುಕೊಳ್ಳಬಾರದು. ಡಾಕ್ಟ್ರು ಇನ್ನೂ ತುಂಟ. 'ಮೊದಲ ರಾತ್ರಿಯಲಿ ಅಳೆಯಲು/ ಹೋದವರಿಗೆಲ್ಲ/ ಮಿಲನದ ಜೇನುತುಪ್ಪ/ ಸಿಗಲೇಬೇಕಿಲ್ಲ......' ಅಂತಾರೆ. ಉಳಿದದ್ದು ನಿಮ್ಮ ಊಹೆ. ಕೆಲ ಬಾರಿ ಅನೇಕ ಕವಿಗಳು ಫೇಸ್ ಬುಕ್ಕಿಗೆ, ವಾಟ್ಸಪ್ಪಿಗೆ, ಪತ್ರಿಕೆಗಳ ಪುಟ ಮೂಲೆಗೆ ಬಲಿಯಾಗಿ ಹೋಗುತ್ತಾರೇನೋ ಅನ್ನಿಸಿ ಆತಂಕಪಡುತ್ತೇನೆ. ನಾಟ್ ದಿಸ್ ಗಾಯ್. ಸಂಕಲನವನ್ನೂ ತರುತ್ತಿದ್ದಾರೆ. ನನ್ನ ಆಸೆಯೆಂದರೆ ಅಜಿತ್ ಹೆಗಡೆ ಹಿಂದಿ- ಉರ್ದು ಕವಿಗಳಾದ ಸಾಹಿರ್ ಲುಧಿಯಾನವಿ, ಗುಲ್ಜಾರ್, ಅಮೃತಾ ಪ್ರೀತಮ್ ರನ್ನು ಓದಬೇಕು. ಆಗ ಇವರ ಕಾವ್ಯ ಮತ್ತಷ್ಟು ಕಸುವುಗೊಳ್ಳುತ್ತದೆ. 'ಹಾಯ್ ಬೆಂಗಳೂರ್!' ನಲ್ಲಿ ಈ ಹುಡುಗನ ಪದ್ಯ ಪ್ರಕಟಿಸಿದ್ದೆ. ಇವತ್ತಿನ ತಹತಹಕ್ಕೆ ಅದೇ ಕಾರಣವಾಯ್ತೋ ಏನೋ? ಕವಿಯೇ ಅಲ್ಲದ ನಾನು ಅಜಿತ್ ಹರೀಶಿಗೆ ಶುಭ ಹಾರೈಸ್ತೇನೆ. ಕಾವ್ಯ ಕಸುವಾಗಲಿ. ನಿತ್ಯ ಗರ್ಭ ಕಟ್ಟಲಿ. ನಿತ್ಯ ಹೆರಿಗೆಯಾಗಲಿ.                                   -- ರವಿ ಬೆಳಗೆರೆ

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
ಕಾವ್ಯಾ ಹೆಗಡೆ
ಪ್ರಬುದ್ಧತೆ ಮತ್ತು ಪಕ್ವತೆಯಿಂದ ಮನಸೆಳೆಯುವ ಕವನಗಳು

ಡಾ. ಅಜಿತ್ ಹರೀಶಿಯವರ ಕವನಗಳು ಮನಸೆಳೆಯುವುದು ಪ್ರಬುದ್ಧವಾದ ಶೈಲಿ ಮತ್ತು ಅವುಗಳ ಪಕ್ವತೆಯಿಂದ. ಈ ಆಯ್ದ ಕವನಗಳ ಸಂಕಲನ, ವಿಷಯ ವೈವಿಧ್ಯಪೂರ್ಣವಾಗಿದ್ದು ಲೇಖಕರ ವಿಷಯ ವ್ಯಾಪ್ತಿ ವಿಸ್ತಾರವಾದುದು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಮಾನವೀಯ ಸಂಬಂಧ, ದಾಂಪತ್ಯ, ಬದುಕಿನ ರಾಜಕೀಯ, ಸಾಮಾಜಿಕ ವಿಷಯಗಳು ಎಲ್ಲವನ್ನೂ ಕವನಗಳು ಒಳಗೊಂಡಿವೆ. "ಸೃಷ್ಟಿ ನವತನದಲಿ ಬಿತ್ತಲಿ" (ಲಯ ಕವನ), "ಹಮ್ಮು ಬಿಮ್ಮುಗಳ ಬಿಡಬೇಕಿದೆ" (ಮನದಂಗಳದಿ ಬೆಳದಿಂಗಳು) ಇಂತ ಸಾಲುಗಳು ಅವುಗಳ ಆಶಯದಿಂದಲೇ ಮನಸ್ಸನ್ನು ಆವರಿಸುತ್ತವೆ. ಸಂಕುಚಿತವಾಗುತ್ತಿರುವ ಮಾನವೀಯ ಸಂಬಂಧಗಳು, ಅತಿವೇಗದ ಬದುಕು, ಕಳೆದುಹೋಗುತ್ತಿರುವ ಸೌಹಾರ್ದತೆ ಇವುಗಳ ಬಗ್ಗೆ ತೀವ್ರವಾಗಿ ಚಿಂತಿಸುತ್ತವೆ ಈ ಕವಿತೆಗಳು. ದಾರಿ ತಪ್ಪದಂತೆ ಎಚ್ಚರಿಸುವ 'ದಯವಿಟ್ಟು ಗಮನಿಸಿ', 'ದೇವದೂತರು' ಇಂಥ ಕವನಗಳು ನಿಜಕ್ಕೂ ಇಂದಿನ ಸಮಾಜದ ಸ್ವಾಸ್ಥ್ಯಕ್ಕೆ ಅಗತ್ಯವಾದವು. ಶಾಂತಿ, ಸೌಹಾರ್ದ ನೆಲೆಸಲಿ ಎಂಬ ಮಹೋನ್ನತ ಆಶಯದ ಕವನಗಳು ಹೊಸ ಉತ್ಸಾಹವನ್ನು ಸ್ಫುರಿಸುತ್ತವೆ. 'ಮೋಹದ ಮಾಯೆ', 'ಶೋಧನೆಯ ಸನ್ನಿಧಿಯಲ್ಲಿ' ಅಂತ ಕೆಲವು ಕವನಗಳಂತೂ ಓದುಗರನ್ನು ಧ್ಯಾನಸ್ಥ ಸ್ಥಿತಿಗೆ ಕರೆದೊಯ್ಯಬಲ್ಲವು. ಮಾನವೀಯತೆ, ಪ್ರೀತಿ, ಮನುಷ್ಯ ಸಂಬಂಧಗಳ ಕುರಿತು ನಮ್ಮಲ್ಲೂ ಹೊಸ ಹುಮ್ಮಸ್ಸು ಹುಟ್ಟಿಸುತ್ತ, ಸಾಹಿತ್ಯ ಕೃಷಿ ಮಾಡುತ್ತಿರುವ ಅಜಿತ್ ಹರೀಶಿ ಅವರ ಬರಹದ ಗಿಡ ಮರವಾಗಿ ಬೆಳೆಯಲಿ, ಆಗಸದವರೆಗೂ ಹಬ್ಬಲಿ. ಎಲ್ಲ ಆಶಯ, ಕನಸುಗಳು ನನಸಾಗಲಿ.

A
Amritha Shetty

ಉತ್ತಮ ಕವನ ಸಂಕಲನ.