Click here to Download MyLang App

ಮೂಚಿಮ್ಮ,  ಡಾ. ಅಜಿತ್ ಹೆಗಡೆ ಹರೀಶಿ,  Moochimmam,  Moochimma,  Dr.Ajith Harishi,    Ajith Hegade Harishi,

ಮೂಚಿಮ್ಮ (ಇಬುಕ್)

e-book

ಪಬ್ಲಿಶರ್
ಡಾ. ಅಜಿತ್ ಹರೀಶಿ
ಮಾಮೂಲು ಬೆಲೆ
Rs. 125.00
ಸೇಲ್ ಬೆಲೆ
Rs. 125.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಬರೆದವರು: ಡಾ.ಅಜಿತ್ ಹರೀಶಿ

ಪ್ರಕಾಶಕರು: ಮೈಲ್ಯಾಂಗ್ ಬುಕ್ಸ್

Publisher: MyLang Books

 

ಸುಳಿದಾಡುವ ಗಾಳಿಯಲ್ಲಿ ಒಲಿದು ಬಂದಂತೆ ಬಂದ ನನ್ನ ಗೆಳೆಯ ಡಾ. ಅಜಿತ್ ಹರೀಶಿ ಕೃತಿಗಳ ಒಳಗೆ ದಟ್ಟವಾದ ಮಾನವೀಯ ಸೆಲೆಗಳನ್ನು ನಾನು ಅನೇಕ ಬಾರಿ ಕಂಡಿದ್ದೇನೆ. ಅವರು ಮಿತಭಾಷಿ ಮತ್ತು ಅನೇಕ ಬಾರಿ ಮೌನಿ. ಅಜಿತ್ ಕಥೆಗಳನ್ನು ಓದಿದಾಗಲೆಲ್ಲಾ ನನಗೆ ಅವರ ಮೌನದ ಅರ್ಥ ಏನು ಎಂಬುದು ಈ ಕೃತಿಯಲ್ಲಿ ಗೊತ್ತಾಗಿದೆ. 


"ಆವಿ” ಕಥೆಯ ಶರತ್ ಅಥವಾ ದಿಶಾಗಿಂತ ಸುನೀಲನ ಮೌನ ಹೆಚ್ಚು ಆಪ್ಯಾಯಮಾನವಾಗುತ್ತದೆ. “ಮೂಚಿಮ್ಮ” ಕಥೆಯಲ್ಲಿ ಬಾಂದು ಕಲ್ಲಿನ ಆ ಕಡೆ ಮತ್ತು ಈ ಕಡೆ ಎರಡು ಪುಟ್ಟ ಪುಟ್ಟ ಔಷಧೀಯ ಗಿಡಗಳನ್ನು ಕೈಯಾರೆ ನೆಟ್ಟ ಮೂಚಿಮ್ಮನ ಮೌನ ಹರಿದಾಡುತ್ತದೆ. “ವಿಲಿಪ್ತ”ದ ಗುರೂಜಿ ವರಲೆ ತಿಂದ ಕಾಷ್ಠವಾಗಿ ಆತನ ಮೌನವೇ ಆತನನ್ನು ಒಳಗೊಳಗೆ ತಿಂದು ಮುಗಿಸುತ್ತದೆ. “ದಹನ”ದ ಕನಸಿನ ಸ್ವಾಮಿ ಗಂಗಾಧರನ ಕನಸುಗಳು ಮತ್ತೊಂದು ಮೌನವನ್ನು ಓದುಗನಿಗೆ ಅರ್ಥಪೂರ್ಣವಾಗಿ ದಾಟಿಸುತ್ತದೆ.”ಪತನ”ದ ವಿನಯನ ಬರಹಗಳಲ್ಲಿ ಮೌನವೇ ಕಥೆಯ ಹೆಚ್ಚುಗಾರಿಕೆಯನ್ನು ತೋರಿಸುತ್ತದೆ.”ಜನಾರ್ದನ” ಕಥೆಯಲ್ಲಿ ಜನಾರ್ದನ ಭಟ್ಟರ ಮೌನ ಪುಂಡ ಮಗನನ್ನು ಪರಿವರ್ತಿಸುತ್ತದೆ. “ಬೆಸುಗೆ”ಯ ಸುಮಾ, ಸಿರಿ ಮತ್ತು ಪ್ರಶಾಂತರ ನಡುವಿನ ಪ್ರೀತಿಯ ಸ್ಪರ್ಶದಲ್ಲಿ ತಾನೇ ಮೌನಕ್ಕೆ ಸರಿದ ರೀತಿ ಆಪ್ಯಾಯಮಾನವೆನಿಸುತ್ತದೆ. “ತಾನೊಂದು ಬಗೆದರೆ” ಕಥೆಯಲ್ಲಿ ಸುದೀರ್ಘ ವಿವರಗಳ ನಡುವೆಯೂ ವೆಂಕಟ ತನ್ನ ನಿರೂಪಣೆಯಲ್ಲಿ ಕೊಟ್ಟ ಅಖಂಡ ಮೌನವೊಂದು ನಮ್ಮನ್ನು ದಾಟಿ ಹೋದ ಭಾಸವಾಗುತ್ತದೆ. “ಪರಿವರ್ತನೆ” ಕಥೆಯ ಅನಂತ ಹೆಗಡೇರು ಕಾಲದ ಓಟದಲ್ಲಿ ತಾನೂ ಭಾಗಿಯಾಗಲಾರದೇ ಮೌನ ಸಾಕ್ಷಿಯಾಗಿ ಕೊನೆಗೂ “ಅಪೀ ನಿಧಾನ ಓಡೇ” ಎಂದು ಹೇಳುವಲ್ಲಿಗೆ ಮನಸ್ಸು ಮುದ್ದೆಯಾಗುತ್ತದೆ. “ನಟ’’ ಕಥೆಯಲ್ಲಿ ನಟರಾಜನ ಅಳು ಅವನ ಮನಸ್ಸಿನ ಮೌನದ ಹರಿವಿನಂತೆ ತಾಕುತ್ತದೆ.

ಈ ಕೃತಿಯಲ್ಲಿ ಬಹಳಷ್ಟು ಕಥೆಗಳು ಸಾಗರಸೀಮೆಯ ಲಹರಿಗಳನ್ನು ಢಾಳಾಗಿ ಹರಿಸಿವೆ. ಭರಣಿಯಲ್ಲಿ ಹೊದ್ದು ಮುಚ್ಚಿದ ಅಪ್ಪೆಮಿಡಿಯ ಸೋನೆಯಂತೆ ಘಮ ಇವೆ. ಒಂದೊಂದು ಕಥೆಯೂ ಕಾಯಿ ಹಾಲಿಗೆ ತೊಡೆದೇವು ಮುರುಕಿದಂತೆ ಓದಿನ ರುಚಿಗೆ ನಮ್ಮನ್ನು ಅಣಿಗೊಳಿಸುತ್ತದೆ.

- ಗೋಪಾಲಕೃಷ್ಣ ಕುಂಟಿನಿ

 

ಅಜಿತ್ ಅವರ ಕತೆಗಳನ್ನು ಓದುವಾಗ ಮೊದಲು ನನಗೆ ವಿಶಿಷ್ಟವೆನಿಸಿದ್ದು ವಿಷಯಗಳ, ಕಥಾಸೂತ್ರಗಳ, ಮತ್ತು ಪಾತ್ರಗಳ ವೈವಿಧ್ಯ. ಒಳನಾಡಿನ ಹಳ್ಳಿಗಳ, ಸಣ್ಣ ಊರುಗಳ ಬೆಳೆಗಾರರ ಬದುಕಿನಿಂದ ಹಿಡಿದು ನಗರ ಜೀವನದ ಸೂಕ್ಷ್ಮಗಳ ವರೆಗೂ ಅವರ ಕತೆಗಳ ಹರಹು ಸರಾಗವಾಗಿ ಹಬ್ಬುತ್ತದೆ. ನೆಲದ ಸೊಗಡಿನ ಘಮವನ್ನು ಎಲ್ಲಿಯೂ ಕಳೆದುಕೊಳ್ಳದೆಯೇ ಆಧುನಿಕ ಜೀವನದ ತೊಡಕುಗಳ ಬಗ್ಗೆ , ಸೂಕ್ಷ ಪ್ರಶ್ನೆಗಳ ಬಗ್ಗೆಯೂ ಅಪರೂಪದ ಸಂವೇದನೆಯನ್ನು ಅವರು ಮಿಡಿಯುತ್ತಾರೆ. ಕತೆಗಾರರಲ್ಲಿ ಇಂಥ ವಿಸ್ತಾರ ನಿಜಕ್ಕೂ ಅಪರೂಪ. ಹೊರನೋಟಕ್ಕೆ ಎರಡು ತುದಿಗಳಂತೆ ಕಂಡು ಬರುವ ಇವೆರಡು ಜೀವನ ದೃಷ್ಟಿಗಳ ನಡುವೆ ಸೇತುವೆಗಳನ್ನು ಕಟ್ಟಬಲ್ಲ ಅಜಿತ್ ರಂಥ ಕತೆಗಾರರು ಕನ್ನಡಕ್ಕೆ ಇಂದು ನಿಜಕ್ಕೂ ಬೇಕಾಗಿದ್ದಾರೆ. 

-ಪವಮಾನ್ ಅಥಣಿ, ಮೈಲ್ಯಾಂಗ್ ಬುಕ್ಸ್

  

ಪುಟಗಳು: 142 

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 4 reviews
100%
(4)
0%
(0)
0%
(0)
0%
(0)
0%
(0)
P
Poornima Malgimani
ಮೂಚಿಮ್ಮ ಕಥಾ ಸಂಕಲನ Mylang ನಲ್ಲಿ ಸರಾಗವಾಗಿ ಓದಿಸಿಕೊಂಡ ಈ ಕಥೆಗಳಲ್ಲಿ ಕೆಲವು ವಿಶಿಷ್ಟವಾಗಿವೆ.

ಆವಿ
ಕಥೆಗಾರನಾಗಿ ಪಾತ್ರಗಳ ಜೀವನದ ಸೂತ್ರ ಹಿಡಿದು ಒಮ್ಮೆ ಕೊಟ್ಟು ಮತ್ತೊಮ್ಮೆ ಕಸಿದುಕೊಳ್ಳುತ್ತಾ ಆಟ ನೋಡುತ್ತಾ ಓದುಗರಿಗೆ ಏನೋ ಹೇಳಿದಂತೆ ಮಾಡಿ ಏನನ್ನೂ ಹೇಳದೇ ಬಿಟ್ಟಿದ್ದಾರೆ ಅನಿಸಿತು. ಸಬಲ- ದುರ್ಬಲನಾಗುತ್ತಾ ಮನುಷ್ಯ ಬದಲಾಗುವುದನ್ನು ಚೆನ್ನಾಗಿ ತೋರಿಸಿದ್ದಾರೆ.
ರಷ್ಯಾ ಗೆ ಹೋಗಿ ವೈದ್ಯಕೀಯ ಕಲಿತು ಬಂದರೂ ಪ್ರಾಕ್ಟೀಸ್ ಮಾಡಲಾಗದ ತನ್ನನ್ನು ಡಾಕ್ಟರ್ ಎಂದು ಕರೆಯಬೇಡಿ ಎನ್ನುವ ಶರತ್ ಪಾತ್ರ ರಿಯಲಿಸ್ಟಿಕ್ ಇದೆ.

ನಟಿ
ಒಂದು ಮುದ್ದು ಜಿಂಕೆ ಮರಿ ಪಂಚಮಿ ನೋಡಿದೊಡನೆ ಮನಸೆಳೆದು ಬಿಡುತ್ತದೆ. ಪ್ರೀತಿ ಏನೆಂದು ಗೊತ್ತಿರದೆ, ಪ್ರೀತಿಸದೆ, ಪ್ರೀತಿಸುವುದ ಕಲಿಸುತ್ತದೆ.
ಅಥವಾ ನೀವು ಹಾಗಂದು ಕೊಂಡಿರೋ?
ಅದರ ಉದ್ದೇಶ ಅದೇನೂ ಆಗಿರಲಿಲ್ಲ!
ಪ್ರೀತಿ ನಟನೆಗೆ ಸಿಗುವಷ್ಟು ನೈಜವೇ?
ಕಳ್ಳುಸುಕಿನಲಿ ಸಿಕ್ಕಿದವರಿಗೆ ಆಸರೆಯಾಗಿ ಕೈ ಚಾಚಲು ಪ್ರೀತಿಯಷ್ಟೇ ಸಾಕೇ?

ಮೂಚಿಮ್ಮ
ಮಲೆನಾಡ ಭಾಷಾ ಸೊಗಡು, rooted ಪಾತ್ರಗಳಾದ ರವೀಶ, ಮೂಚಿಮ್ಮರು, ಬಂದೋ ಬಾರದೆಯೊ ಕಾಡುವ ಭಾವಗಳು ಅಲ್ಲಲ್ಲೇ ನಿಲ್ಲಿಸಿ ಸೆಳೆದುಬಿಡುವ ಈ ಕಥೆಗೆ ಬಾಂದಗಲ್ಲು ಸಾಕ್ಷಿ!
ಕೊನೆಗಾಲದಲ್ಲಿ ಕಾದುಕೊಂಡು ಬಂದ ಆಸ್ತಿ ಒಪ್ಪಿಸಿಹೋಗಲು ಕರುಳ ಬಳ್ಳಿ ಬೆಸುಗೆ ಸಾಕೇ?

ವಿಲಿಪ್ತ
ಅರಿಷಡ್ವರ್ಗಗಳನ್ನು ಹತ್ತಿಕ್ಕುವಲ್ಲಿ ಸಫಲರಾದವರಿಗಿಂತ
ಹೀನಾಯವಾಗಿ ಸೋತವರೇ ಹೆಚ್ಚು. ಆದರೆ ಈ ಸೋಲು ಆಶ್ರಮದ ಸ್ವಾಮಿಯೊಬ್ಬರದಾದರೆ, ಉರುಳುವುದು ಹೆಣಗಳಷ್ಟೇ ಅಲ್ಲ, ಹೆಣಗಲಾರದ ಆತ್ಮಸಮ್ಮಾನ. ಸಮಾಜದೊಂದಿಗೆ ಹೋರಾಟ ಹೊಸತೇನಲ್ಲ, ಆತ್ಮದೊಂದಿಗೆ ಸುಲಭವೇನಲ್ಲ. ಈ ಕಥೆ ಹೊಸದಲ್ಲ, ಹೇಳಿದ ಪರಿ ವಿಭಿನ್ನವಾಗಿದೆ. ವಿಲಿಪ್ತರಾಗಲು ಆಶ್ರಮವೇ ಬೇಕೇ ಎನ್ನುವ ಪ್ರಶ್ನೆ ನನ್ನ ಕಾಡುತ್ತಿದೆ.

ದಹನ ಮತ್ತು ಪತನ ಇಷ್ಟವಾದ ಇತರ ಕಥೆಗಳು.

ಅಜಿತ್ ಅವರ ಕಥೆಗಳಲ್ಲಿ ಮಾನವೀಯ ಸಂಬಂಧಗಳ ತುಡಿತ, ತಲ್ಲಣಗಳು ಎದ್ದು ಕಾಣುತ್ತವೆ. ಸರಳ ಮತ್ತು ನೇರವಾದ ಕಥಾ ತಂತ್ರ ಕಥಾ ವಸ್ತುವನ್ನು ಗ್ರಹಿಸಲು ಅನುಕೂಲವಾಗಿದೆ. ಅಥವಾ ಈಗಾಗಲೇ ಈ ಕಥಾವಸ್ತುಗಳು ಹಲವು ರೀತಿಯಲ್ಲಿ ತಾಕಿರುವುದರಿಂದ ಪಾತ್ರಗಳು, ಸನ್ನಿವೇಶಗಳು ಪರಿಚಿತ ಅನ್ನಿಸಿದುವು.
ಭಾಷಾ ಸೊಗಡು ಆತ್ಮೀಯವಾಗಿಸಿದುವು.
Narrative ಇಷ್ಟವಾಯಿತು. ಉದ್ದೇಶ ಪೂರ್ವಕವಾಗಿ ಯಾವ ಪ್ರಶ್ನೆಗಳನ್ನೂ ಹುಟ್ಟಿಹಾಕದಿದ್ದರೂ ಉತ್ತರಗಳಿಗೆ ಮತ್ತೊಮ್ಮೆ ಕಥೆಗಳನ್ನು ಓದುವಂತೆ ಒತ್ತಾಯಿಸುತ್ತಾರೆ ಅಜಿತ್!
Effortless writing. ಅಭಿನಂದನೆಗಳು.

A
Amritha Shetty

ಕಥಾ ಸಂಕಲನ: ಮೂಚಿಮ್ಮ
ಲೇಖಕರು: ಡಾ. ಅಜಿತ್ ಹರೀಶಿ
ಬಿಡುಗಡೆ : ಮೈಲಾಂಗ್ ಡಿಜಿಟಲ್
ಆಡಿಯೋ ಧ್ವನಿ: ಮಮತಾ ಶೆಟ್ಟಿ
ಲೇಖಕರಾದ ಡಾಕ್ಟರ್ ಅಜಿತ್ ಹರೀಶಿ ಯವರು ಬರೆದ ','ಮೂಚಿಮ್ಮ' ಎನ್ನುವ ಕಥಾ ಸಂಕಲನ ಇತ್ತೀಚಿಗೆ ಯಶಸ್ವಿಯಾಗಿ ಮೈಲಾಂಗ್ ಡಿಜಿಟಲ್ ನಲ್ಲಿ ಬಿಡುಗಡೆಗೊಂಡಿದ್ದು, ಈಗಾಗಲೇ ಓದುಗರಿಗೆ ಮೂರು ಆವೃತ್ತಿಗಳಲ್ಲಿ ಲಭ್ಯವಿದೆ . ( ಇಬುಕ್, ಪ್ರಿಂಟ್ ಪ್ರತಿ, ಆಡಿಯೋ ಬುಕ್) ಈ ಕಥಾಸಂಕಲನದ ಕುರಿತು ಅನೇಕ ಓದುಗರು ಬರೆದಂತಹ ವಿಮರ್ಶೆಗಳನ್ನು, ಪರಿಚಯವನ್ನು ನಾವು ಈಗಾಗಲೇ ಓದಿದ್ದೇವೆ. ನಾನು ಈ ಕಥಾಸಂಕಲನದ ಆಡಿಯೋ ಬುಕ್ಕನ್ನು ಖರೀದಿಸಿ, ಅದನ್ನು ಕೇಳಿ ನನ್ನ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತಿದ್ದೇನೆ.
ಈ ಆಡಿಯೋ ಬುಕ್ ಗೆ ಧ್ವನಿ ನೀಡಿದವರು ಮಮತಾ ಶೆಟ್ಟಿಯವರು. ಈ ಕಥಾಸಂಕಲನದ ಹತ್ತು ಕಥೆಗಳು ಬೇರೆ ಬೇರೆ ಸನ್ನಿವೇಶಗಳಿಂದ, ಬೇರೆಬೇರೆ ಭಾವನೆಗಳಿಂದ ಕೂಡಿದ ಕಥಾಹಂದರ ವಾಗಿದೆ. ತನ್ನ ಧ್ವನಿಯಿಂದ ಆ ಕಥೆಯ ಭಾವನೆಗಳನ್ನು ಓದುಗನ ಮನಸ್ಸು, ಹೃದಯವನ್ನು ತಟ್ಟುವಲ್ಲಿ ಧ್ವನಿ ಕಲಾವಿದೆ ಮಮತಾರವರು ಯಶಸ್ವಿಯಾಗಿದ್ದಾರೆ ಅನ್ನಿಸಿತು. ಭಾವನೆಗಳ ಏರಿಳಿತವನ್ನು, ಕಥೆಗಳ ಭಾವನೆಗಳೊಂದಿಗೆ ಒಂದಾಗಿ ಧ್ವನಿ ಮತ್ತು ಕಥೆಗೆ ಜೀವತುಂಬಿದ್ದಾರೆ ಎನ್ನಬಹುದು. ಅದರಲ್ಲೂ ಇನ್ನೊಂದು ವಿಶೇಷತೆ ಎಂದರೆ, ಹವ್ಯಕ ಭಾಷೆಯಲ್ಲಿರುವ ಕಥೆಗಳನ್ನು, ಆ ಭಾಷೆ ತನ್ನದೇ ಅನ್ನುವಷ್ಟು ಆ ಭಾಷೆಯ ಹಿಡಿತವನ್ನು ತಮ್ಮ ಧ್ವನಿಯಲ್ಲಿ ರಿಸಿಕೊಂಡು, ಆ ಭಾಷೆಯ ಸೊಗಡು ಮತ್ತು ಆಪ್ತತೆಯನ್ನು ಓದುಗರಲ್ಲಿ ಇನ್ನಷ್ಟು ಹೆಚ್ಚಿಸಿದ್ದಾರೆ. ಈ ಕಥೆಯಲ್ಲಿ ‌ಬೇರೆಬೇರೆ ಅದ್ಭುತ ಸಂದೇಶಗಳನ್ನು ಕೊಡುವ ಪ್ರತೀ ಪಾತ್ರವೂ ನಮ್ಮ ಮನೆಯಲ್ಲಿಯೇ ಅಥವಾ ನಮ್ಮ ಸುತ್ತಮುತ್ತಲೇ ನಡೆಯುತ್ತಿದೆ ಎನ್ನುವಷ್ಟರ ಮಟ್ಟಿಗೆ ಕತೆಯನ್ನು ಓದುಗನಿಗೆ ತನ್ನ ಧ್ವನಿಯಿಂದ ಮಮತಾ ಶೆಟ್ಟಿಯವರು ಮುಟ್ಟಿಸಿದ್ದಾರೆ ಎಂದರೆ ತಪ್ಪಾಗಲಾರದು. ಕಥೆಗೆ ಧ್ವನಿ ನೀಡಲು ಬೇಕಾಗಿರುವ ಎಲ್ಲಾ ರೀತಿಯ ಏರಿಳಿತದ ಹಿಡಿತ, ಮೃದುವಾದ ದ್ವನಿ, ಭಾವನೆಗಳಿಗೆ ಸ್ಪಂದಿಸುವಂತೆ ಧ್ವನಿಯ ಬದಲಾವಣೆ ಇದೆಲ್ಲವೂ ಮಮತಾ ರವರಲ್ಲಿ ಇದೆ. ನಾನು ಈಗಾಗಲೇ ಈ ಧ್ವನಿಯನ್ನು ಆಸ್ವಾದಿಸಿದ್ದೇನೆ. ನೀವು ಕೂಡ ಆಡಿಯೋ ಬುಕ್ ಖರೀದಿಸಿ ಮಮತ ರವರ ಧ್ವನಿಯನ್ನು ಆಸ್ವಾದಿಸಿ. ಇನ್ನಷ್ಟು ಆಡಿಯೋ ಬುಕ್ಕುಗಳು ಅವರ ಧ್ವನಿಯಲ್ಲಿ ಹೊರಬರಲಿ ಎನ್ನುವ ಪ್ರೀತಿಯ ಹಾರೈಕೆ.

A
Amritha Shetty

ಕಥಾ ಸಂಕಲನ: ಮೂಚಿಮ್ಮ
ಲೇಖಕರು: ಡಾ. ಅಜಿತ್ ಹರೀಶಿ
ಬಿಡುಗಡೆ : ಮೈಲಾಂಗ್ ಡಿಜಿಟಲ್
ಆಡಿಯೋ ಧ್ವನಿ: ಮಮತಾ ಶೆಟ್ಟಿ
ಲೇಖಕರಾದ ಡಾಕ್ಟರ್ ಅಜಿತ್ ಹರೀಶಿ ಯವರು ಬರೆದ ','ಮೂಚಿಮ್ಮ' ಎನ್ನುವ ಕಥಾ ಸಂಕಲನ ಇತ್ತೀಚಿಗೆ ಯಶಸ್ವಿಯಾಗಿ ಮೈಲಾಂಗ್ ಡಿಜಿಟಲ್ ನಲ್ಲಿ ಬಿಡುಗಡೆಗೊಂಡಿದ್ದು, ಈಗಾಗಲೇ ಓದುಗರಿಗೆ ಮೂರು ಆವೃತ್ತಿಗಳಲ್ಲಿ ಲಭ್ಯವಿದೆ . ( ಇಬುಕ್, ಪ್ರಿಂಟ್ ಪ್ರತಿ, ಆಡಿಯೋ ಬುಕ್) ಈ ಕಥಾಸಂಕಲನದ ಕುರಿತು ಅನೇಕ ಓದುಗರು ಬರೆದಂತಹ ವಿಮರ್ಶೆಗಳನ್ನು, ಪರಿಚಯವನ್ನು ನಾವು ಈಗಾಗಲೇ ಓದಿದ್ದೇವೆ. ನಾನು ಈ ಕಥಾಸಂಕಲನದ ಆಡಿಯೋ ಬುಕ್ಕನ್ನು ಖರೀದಿಸಿ, ಅದನ್ನು ಕೇಳಿ ನನ್ನ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತಿದ್ದೇನೆ.
ಈ ಆಡಿಯೋ ಬುಕ್ ಗೆ ಧ್ವನಿ ನೀಡಿದವರು ಮಮತಾ ಶೆಟ್ಟಿಯವರು. ಈ ಕಥಾಸಂಕಲನದ ಹತ್ತು ಕಥೆಗಳು ಬೇರೆ ಬೇರೆ ಸನ್ನಿವೇಶಗಳಿಂದ, ಬೇರೆಬೇರೆ ಭಾವನೆಗಳಿಂದ ಕೂಡಿದ ಕಥಾಹಂದರ ವಾಗಿದೆ. ತನ್ನ ಧ್ವನಿಯಿಂದ ಆ ಕಥೆಯ ಭಾವನೆಗಳನ್ನು ಓದುಗನ ಮನಸ್ಸು, ಹೃದಯವನ್ನು ತಟ್ಟುವಲ್ಲಿ ಧ್ವನಿ ಕಲಾವಿದೆ ಮಮತಾರವರು ಯಶಸ್ವಿಯಾಗಿದ್ದಾರೆ ಅನ್ನಿಸಿತು. ಭಾವನೆಗಳ ಏರಿಳಿತವನ್ನು, ಕಥೆಗಳ ಭಾವನೆಗಳೊಂದಿಗೆ ಒಂದಾಗಿ ಧ್ವನಿ ಮತ್ತು ಕಥೆಗೆ ಜೀವತುಂಬಿದ್ದಾರೆ ಎನ್ನಬಹುದು. ಅದರಲ್ಲೂ ಇನ್ನೊಂದು ವಿಶೇಷತೆ ಎಂದರೆ, ಹವ್ಯಕ ಭಾಷೆಯಲ್ಲಿರುವ ಕಥೆಗಳನ್ನು, ಆ ಭಾಷೆ ತನ್ನದೇ ಅನ್ನುವಷ್ಟು ಆ ಭಾಷೆಯ ಹಿಡಿತವನ್ನು ತಮ್ಮ ಧ್ವನಿಯಲ್ಲಿ ರಿಸಿಕೊಂಡು, ಆ ಭಾಷೆಯ ಸೊಗಡು ಮತ್ತು ಆಪ್ತತೆಯನ್ನು ಓದುಗರಲ್ಲಿ ಇನ್ನಷ್ಟು ಹೆಚ್ಚಿಸಿದ್ದಾರೆ. ಈ ಕಥೆಯಲ್ಲಿ ‌ಬೇರೆಬೇರೆ ಅದ್ಭುತ ಸಂದೇಶಗಳನ್ನು ಕೊಡುವ ಪ್ರತೀ ಪಾತ್ರವೂ ನಮ್ಮ ಮನೆಯಲ್ಲಿಯೇ ಅಥವಾ ನಮ್ಮ ಸುತ್ತಮುತ್ತಲೇ ನಡೆಯುತ್ತಿದೆ ಎನ್ನುವಷ್ಟರ ಮಟ್ಟಿಗೆ ಕತೆಯನ್ನು ಓದುಗನಿಗೆ ತನ್ನ ಧ್ವನಿಯಿಂದ ಮಮತಾ ಶೆಟ್ಟಿಯವರು ಮುಟ್ಟಿಸಿದ್ದಾರೆ ಎಂದರೆ ತಪ್ಪಾಗಲಾರದು. ಕಥೆಗೆ ಧ್ವನಿ ನೀಡಲು ಬೇಕಾಗಿರುವ ಎಲ್ಲಾ ರೀತಿಯ ಏರಿಳಿತದ ಹಿಡಿತ, ಮೃದುವಾದ ದ್ವನಿ, ಭಾವನೆಗಳಿಗೆ ಸ್ಪಂದಿಸುವಂತೆ ಧ್ವನಿಯ ಬದಲಾವಣೆ ಇದೆಲ್ಲವೂ ಮಮತಾ ರವರಲ್ಲಿ ಇದೆ. ನಾನು ಈಗಾಗಲೇ ಈ ಧ್ವನಿಯನ್ನು ಆಸ್ವಾದಿಸಿದ್ದೇನೆ. ನೀವು ಕೂಡ ಆಡಿಯೋ ಬುಕ್ ಖರೀದಿಸಿ ಮಮತ ರವರ ಧ್ವನಿಯನ್ನು ಆಸ್ವಾದಿಸಿ. ಇನ್ನಷ್ಟು ಆಡಿಯೋ ಬುಕ್ಕುಗಳು ಅವರ ಧ್ವನಿಯಲ್ಲಿ ಹೊರಬರಲಿ ಎನ್ನುವ ಪ್ರೀತಿಯ ಹಾರೈಕೆ

ಕಾವ್ಯಾ ಹೆಗಡೆ
ಮನಸ್ಸಿಗೆ ಇಳಿಯುವ ಕಥೆಗಳು

'ಮೂಚಿಮ್ಮ' ಪುಸ್ತಕದ ಶೀರ್ಷಿಕೆ ಮತ್ತು ಮುಖಪುಟ ವಿನ್ಯಾಸದಿಂದ ಮನ ಸೆಳೆಯುತ್ತದೆ ಮತ್ತು ಓದಿದ ಮೇಲೆ ಕಥೆಗಳು ಮನಸ್ಸಿಗಿಳಿಯುತ್ತವೆ. ಪ್ರತಿ ಕಥೆಯೂ ವಿಭಿನ್ನ, ವಿಶಿಷ್ಟವಾಗಿವೆ. ದಹನ, ವಿಲಿಪ್ತ, ನಟ ಕಥೆಗಳು ಗಂಭೀರ ಓದಿಗೆ ಹಚ್ಚುವಂತಹ ಕಥೆಗಳಾದರೆ ಮೂಚಿಮ್ಮ, ಪರಿವರ್ತನೆ, ಬೆಸುಗೆ ಕಥೆಗಳು ಮಲೆನಾಡಿನ ಹವ್ಯಕ ಭಾಷೆ ಮತ್ತು ಜೀವನ ಪದ್ಧತಿಯ ಸೊಗಡನ್ನು ಸೂಸುತ್ತ ಹೃದಯವನ್ನು ತಟ್ಟುತ್ತವೆ. 'ಆವಿ' ಕಥೆಯ ದಿಶಾಳ ಅಚಲ ಪ್ರೇಮ ಮತ್ತು ಬದುಕಿನ ಬಗೆಗಿನ ನಂಬಿಕೆ ನಮ್ಮೊಳಗೂ ಹೊಸ ಜೀವನ ಪ್ರೀತಿಯನ್ನು ಹುಟ್ಟಿಸುತ್ತದೆ. 'ತಾನೊಂದು ಬಗೆದರೆ' ಹೆಣಿಗೆಯ ತಂತ್ರ ಅದ್ಭುತವಾಗಿದೆ ಮತ್ತು ಅಲ್ಲಿನ ವೆಂಕಟನ ಪಾತ್ರ ಬಹುಕಾಲ ಕಾಡುವಂತದ್ದು. ಒಟ್ಟಾರೆ ಹತ್ತು ಕಥೆಗಳು ಬೌದ್ಧಿಕ ಮತ್ತು ಭಾವುಕ ಅಲೆಗಳನ್ನು ಎಬ್ಬಿಸುತ್ತವೆ. ಸಾಹಿತ್ಯಕವಾಗಿ ಕೂಡ ಉತ್ತಮ ಕೃತಿ.