Click here to Download MyLang App

ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 1 (ಇಬುಕ್) - MyLang

ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 1 (ಇಬುಕ್)

e-book

ಪಬ್ಲಿಶರ್
ಗಿರಿಮನೆ ಶ್ಯಾಮರಾವ್
ಮಾಮೂಲು ಬೆಲೆ
Rs. 79.00
ಸೇಲ್ ಬೆಲೆ
Rs. 79.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಗಿರಿಮನೆ ಪ್ರಕಾಶನ

Publisher: Girimane Prakashana

ವೇದ ಮಂತ್ರಗಳ ರಹಸ್ಯ 

ಸತ್ಯ ತಿಳಿಯದಿದ್ದರೆ ಸುಳ್ಳೇ ಸತ್ಯದಂತೆ ಭಾಸವಾಗುತ್ತದೆ. ಜ್ಞಾನವಿಲ್ಲದಿದ್ದರೆ ಅಜ್ಞಾನವನ್ನೇ ಜ್ಞಾನವೆಂದುಕೊಳ್ಳುತ್ತೇವೆ. ಜನಸಾಮಾನ್ಯರಿಗೆ ವೇದಮಂತ್ರಗಳ ಬಗ್ಗೆ ಅಜ್ಞಾನ ಇದೆ. ದೇವರ ವಿಷಯ ಸೇರಿದಂತೆ ನಮ್ಮ ಇಡೀ ಬದುಕು ಅದರೊಂದಿಗೆ ತಳಕು ಹಾಕಿಕೊಂಡಿದೆ. ಮಂತ್ರಗಳ ಸರಿಯಾದ ಅರ್ಥ ತಿಳಿಯದೆ ಬೇರೇನೋ ಮಾಡುವುದು, ಅರೆಬರೆ ತಿಳಿದವರು ತಿಳಿಯದವರನ್ನು ಶೋಷಿಸುವುದು ಎಲ್ಲವೂ ನಡೆಯುತ್ತದೆ. ವೇದಮಂತ್ರಗಳೆಂದರೆ ಬೂದಿ ಮುಚ್ಚಿದ ಕೆಂಡದಂತೆಯೇ. ಒಳಗೆ ಕೆಂಡವಿರುವುದು ತಿಳಿಯದೆ ಕೆಲವರು ಮೇಲೆ ಹಾರುವ ಬೂದಿಯನ್ನು ಮಾತ್ರ ನೋಡುತ್ತಾರೆ. ವೇದ, ಜ್ಞಾನ ಎಂಬ ಕೆಂಡ. ಅದನ್ನು ಪ್ರಜ್ವಲಿಸಿದರೆ ಅದು ಎಲ್ಲರಿಗೂ ಉಪಯುಕ್ತವಾಗುವ ಬೆಳಕಿನ ಜ್ಯೋತಿ! ಅದರ ಬೆಳಕಿನಲ್ಲಿ ಎಲ್ಲರೂ ತಮ್ಮ ಬಾಳನ್ನು ಬೆಳಗಿಸಿಕೊಳ್ಳಬಹುದು. ‘ವೇದ ಎಲ್ಲರಿಗೂ ಅಲ್ಲ; ಕಾವಿ ತೊಟ್ಟು, ಜುಟ್ಟು ಬಿಟ್ಟು ದೇವರ ಬಗ್ಗೆ ಹೇಳಿದ್ದನ್ನೇ ಹೇಳಿ ತಲೆ ತಿನ್ನುವ; ಬದುಕಿಗೆ ಅನಗತ್ಯವಾದ ಶಾಸ್ತ್ರಗಳಿಂದ ಕೂಡಿದ ಗ್ರಂಥ’ ಎಂಬಂತಹಾ ಕಲ್ಪನೆಗಳೇ ಜಾಸ್ತಿ. ಆದರೆ ವೇದ ಎಂದರೆ ಅದಲ್ಲವೇ ಅಲ್ಲ! ಆಧುನಿಕರು ನಾಚುವಂತೆ ಅದು ಮೂಢನಂಬಿಕೆಗಳನ್ನು ಹರಿದೆಸೆಯುತ್ತದೆ. ಅದೊಂದು ಸಾಮಾನ್ಯರೂ ತಿಳಿಯಬೇಕಾದ ಬದುಕುವ ಕಲೆ. ಎಲ್ಲಕ್ಕೂ ಮೊದಲು ಮಂತ್ರಗಳು ಎಂದರೇನು? ದೇವರ ವಿಷಯವಾಗಿ ಅದು ಏನು ಹೇಳಿದೆ? ಎಂದು ತಿಳಿಯಬೇಕು. ಮೊದಲಿಗೆ ಅದು ನಮ್ಮ ನಂಬಿಕೆಗೆ ವ್ಯತಿರಿಕ್ತವಾದ ಸಂಗತಿಗಳಂತೆ ಕಂಡರೂ ಅರ್ಥಮಾಡಿಕೊಳ್ಳುತ್ತಾ ಹೋದಂತೆ ಅದೆಷ್ಟು ಸರಳ-ಸುಲಭ ಎನ್ನುವುದು ಗೊತ್ತಾಗುತ್ತದೆ. ಹಾಗಾಗಿ ವೇದಮಂತ್ರಗಳು ಏನು ಹೇಳುತ್ತವೆ ಎಂದು ತಿಳಿದರೆ ನಿಗೂಢತೆ ಉಳಿಯದೆ ಅಜ್ಞಾನ ಹರಿಯುತ್ತದೆ; ದುರುಪಯೋಗ ಸಾಧ್ಯವಿಲ್ಲ. ಆಗ ಸರಿದಾರಿಯಲ್ಲಿ ನಡೆಯುವವರ ಆತ್ಮವಿಶ್ವಾಸ ಹೆಚ್ಚುತ್ತದೆ. ಅಡ್ಡದಾರಿ ಹಿಡಿದವರು ಸರಿದಾರಿಗೆ ಮರಳುತ್ತಾರೆ. ಜ್ಞಾನ ಎಂದರೆ ಅದೇ ತಾನೇ!

 

ಪುಟಗಳು  : 75

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !